<p><strong>ಷರತ್ತಿನ ಮೇಲೆ ತಮಿಳುನಾಡಿಗೆ ನೀರು</strong></p>.<p><strong>ಬೆಂಗಳೂರು, ಜ. 3– </strong>ಎರಡು ದಿನಗಳ ಸುದೀರ್ಘ ವಿಭಿನ್ನ ರೀತಿಯ ಕಾವೇರಿದ ವಾದ ವಿವಾದ ಹಾಗೂ ವಿಚಾರ ಮಂಥನದ ನಂತರ ಪ್ರಧಾನಿ ಸೂಚನೆಗೆ ಅನುಗುಣವಾಗಿ ತಮಿಳುನಾಡಿಗೆ 6 ಟಿಎಂಸಿ ಅಡಿ ನೀರು ಬಿಡಲು ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ಸೇರಿದ್ದ ಸರ್ವಪಕ್ಷಗಳ ಸಭೆ ಇಂದು ಇಲ್ಲಿ ತೀರ್ಮಾನಿಸಿತು.</p>.<p>ಕೇಂದ್ರ ಸರ್ಕಾರ ರಾಷ್ಟ್ರೀಯ ಜಲ ನೀತಿಗೆ ಮಾರ್ಗಸೂಚಿ ಪ್ರಕಟಿಸುವವರೆಗೆ ಕಾವೇರಿ ಜಲ ವಿವಾದ ನ್ಯಾಯಮಂಡಲಿ ಮುಂದೆ ಭಾಗವಹಿಸದಿರಲು ಸಭೆ ನಿರ್ಧರಿಸಿತು.</p>.<p><strong>ಜೆ.ಎಚ್.ಪಟೇಲ್ ಆಯ್ಕೆ ರದ್ದು</strong></p>.<p><strong>ಬೆಂಗಳೂರು, ಜ. 3–</strong> ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದ ಅಭ್ಯರ್ಥಿಯೊಬ್ಬರ ನಾಮಪತ್ರವನ್ನು ನಿರಾಕರಿಸಿದುದು ತಪ್ಪು ಎಂಬ ಕಾರಣದ ಮೇಲೆ ಶಿವಮೊಗ್ಗ ಜಿಲ್ಲೆ ಚನ್ನಗಿರಿ ಕ್ಷೇತ್ರದ ಚುನಾವಣೆಯನ್ನು ಹೈಕೋರ್ಟ್ ಇಂದು ರದ್ದುಗೊಳಿಸಿತು.</p>.<p>ಇದರಿಂದಾಗಿ ಆ ಕ್ಷೇತ್ರದಿಂದ ಗೆದ್ದಿದ್ದ ಉಪಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಆಯ್ಕೆ ರದ್ದಾಗಿದೆ.</p>.<p>ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಾಗುವಂತೆ ತೀರ್ಪಿನ ಜಾರಿಗೆ ನಾಲ್ಕು ವಾರಗಳ ಅವಧಿಗೆ ತಡೆ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಷರತ್ತಿನ ಮೇಲೆ ತಮಿಳುನಾಡಿಗೆ ನೀರು</strong></p>.<p><strong>ಬೆಂಗಳೂರು, ಜ. 3– </strong>ಎರಡು ದಿನಗಳ ಸುದೀರ್ಘ ವಿಭಿನ್ನ ರೀತಿಯ ಕಾವೇರಿದ ವಾದ ವಿವಾದ ಹಾಗೂ ವಿಚಾರ ಮಂಥನದ ನಂತರ ಪ್ರಧಾನಿ ಸೂಚನೆಗೆ ಅನುಗುಣವಾಗಿ ತಮಿಳುನಾಡಿಗೆ 6 ಟಿಎಂಸಿ ಅಡಿ ನೀರು ಬಿಡಲು ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ಸೇರಿದ್ದ ಸರ್ವಪಕ್ಷಗಳ ಸಭೆ ಇಂದು ಇಲ್ಲಿ ತೀರ್ಮಾನಿಸಿತು.</p>.<p>ಕೇಂದ್ರ ಸರ್ಕಾರ ರಾಷ್ಟ್ರೀಯ ಜಲ ನೀತಿಗೆ ಮಾರ್ಗಸೂಚಿ ಪ್ರಕಟಿಸುವವರೆಗೆ ಕಾವೇರಿ ಜಲ ವಿವಾದ ನ್ಯಾಯಮಂಡಲಿ ಮುಂದೆ ಭಾಗವಹಿಸದಿರಲು ಸಭೆ ನಿರ್ಧರಿಸಿತು.</p>.<p><strong>ಜೆ.ಎಚ್.ಪಟೇಲ್ ಆಯ್ಕೆ ರದ್ದು</strong></p>.<p><strong>ಬೆಂಗಳೂರು, ಜ. 3–</strong> ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದ ಅಭ್ಯರ್ಥಿಯೊಬ್ಬರ ನಾಮಪತ್ರವನ್ನು ನಿರಾಕರಿಸಿದುದು ತಪ್ಪು ಎಂಬ ಕಾರಣದ ಮೇಲೆ ಶಿವಮೊಗ್ಗ ಜಿಲ್ಲೆ ಚನ್ನಗಿರಿ ಕ್ಷೇತ್ರದ ಚುನಾವಣೆಯನ್ನು ಹೈಕೋರ್ಟ್ ಇಂದು ರದ್ದುಗೊಳಿಸಿತು.</p>.<p>ಇದರಿಂದಾಗಿ ಆ ಕ್ಷೇತ್ರದಿಂದ ಗೆದ್ದಿದ್ದ ಉಪಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಆಯ್ಕೆ ರದ್ದಾಗಿದೆ.</p>.<p>ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಾಗುವಂತೆ ತೀರ್ಪಿನ ಜಾರಿಗೆ ನಾಲ್ಕು ವಾರಗಳ ಅವಧಿಗೆ ತಡೆ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>