<p><strong>ನಿರುದ್ಯೋಗಿ ಕೃಷಿ ಪದವೀಧರರನ್ನು ನೆಲೆಗೊಳಿಸಲು ರಾಜ್ಯದ ಯೋಜನೆ</strong></p>.<p>ಬೆಂಗಳೂರು, ನ. 18– ರಾಜ್ಯದ ನಿರುದ್ಯೋಗಿ ಕೃಷಿ ಪದವೀಧರರನ್ನು ಜಮೀನಿನ ಮೇಲೆ ನೆಲೆಗೊಳಿಸುವ ಬೃಹತ್ ಯೋಜನೆಯನ್ನು ಚಿಕ್ಕಮಗಳೂರು ಜಿಲ್ಲೆಯಿಂದ ರಾಜ್ಯ ಸರ್ಕಾರ ಆರಂಭಿಸಲಿದೆ.</p>.<p>ತಲಾ 12 ಎಕರೆ ಭೂಮಿ ಹಾಗೂ ಕೃಷಿಗೆ ಅಗತ್ಯವಾದ ಸೌಕರ್ಯಗಳನ್ನೆಲ್ಲ ಪಡೆಯುವ 50 ಮಂದಿ ನಿರುದ್ಯೋಗಿ ಕೃಷಿ ಪದವೀಧರರನ್ನು ಮೊದಲಿಗೆ ನೆಲೆಗೊಳಿಸಲಾಗುವುದು.</p>.<p>ಇಂದು ನಡೆದ ಮಂತ್ರಿಮಂಡಲದ ಸಭೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ 100 ಮಂದಿ ನಿರುದ್ಯೋಗಿಗಳನ್ನು ನೆಲೆಗೊಳಿಸುವ 60 ಲಕ್ಷ ರೂಪಾಯಿಯ ವಿಶೇಷ ಯೋಜನೆಯನ್ನು ಅಂಗೀಕರಿಸಿತು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಈ ಹಣವನ್ನು ಒದಗಿಸುವುದು, ರಾಜ್ಯ ಸರ್ಕಾರ ಈ ಹಣಕ್ಕೆ ಖಾತರಿ ನಿಲ್ಲುವುದು.</p>.<p><strong>ಎಕ್ಸೈಜ್ ತೆರಿಗೆ ರೂಪದಲ್ಲಿ ಶಿಕ್ಷಣ ಶುಲ್ಕ ವಸೂಲಿ ಅಕ್ರಮ: ಸುಪ್ರೀಂ ಕೋರ್ಟ್ ತೀರ್ಪು</strong></p>.<p>ನವದೆಹಲಿ, ನ. 18– ಅಬಕಾರಿ ಕಂಟ್ರಾಕ್ಟರುಗಳಿಂದ ಎಕ್ಸೈಜ್ ಸುಂಕವಾಗಿ ಶಿಕ್ಷಣ ಶುಲ್ಕ ವಸೂಲಿ ಮಾಡುವುದನ್ನು ರದ್ದುಗೊಳಿಸಿ ಮೈಸೂರು ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ನ ಸಂವಿಧಾನಕ್ಕೆ ಸಂಬಂಧಿಸಿದ ಬೆಂಚ್ ಇಂದು ಎತ್ತಿಹಿಡಿಯಿತು.</p>.<p>ಶಿಕ್ಷಣ ಶುಲ್ಕವನ್ನು ವಸೂಲಿ ಮಾಡಲು ರಾಜ್ಯ ಸರ್ಕಾರಕ್ಕೆ ಯಾವ ಅಧಿಕಾರವೂ ಇಲ್ಲವೆಂಬ ಹೈಕೋರ್ಟ್ನ ತೀರ್ಪನ್ನು ಬದಲಾಯಿಸಲು ಯಾವ ಕಾರಣವೂ ಇಲ್ಲವೆಂದು ತಿಳಿಸಿ, ನ್ಯಾಯಾಲಯವು ರಾಜ್ಯ ಸರ್ಕಾರದ ಅಪೀಲನ್ನು ವಜಾ ಮಾಡಿದೆ.</p>.<p>ಎಕ್ಸೈಜ್ ಸುಂಕದ ಅಂಗವಾಗಿ ಶಿಕ್ಷಣ ಶುಲ್ಕವನ್ನು ಮೈಸೂರು ಸರ್ಕಾರವು ಅಬಕಾರಿ ಕಂಟ್ರಾಕ್ಟರುಗಳಿಂದ ವಸೂಲಿ ಮಾಡುತ್ತಿದ್ದಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಿರುದ್ಯೋಗಿ ಕೃಷಿ ಪದವೀಧರರನ್ನು ನೆಲೆಗೊಳಿಸಲು ರಾಜ್ಯದ ಯೋಜನೆ</strong></p>.<p>ಬೆಂಗಳೂರು, ನ. 18– ರಾಜ್ಯದ ನಿರುದ್ಯೋಗಿ ಕೃಷಿ ಪದವೀಧರರನ್ನು ಜಮೀನಿನ ಮೇಲೆ ನೆಲೆಗೊಳಿಸುವ ಬೃಹತ್ ಯೋಜನೆಯನ್ನು ಚಿಕ್ಕಮಗಳೂರು ಜಿಲ್ಲೆಯಿಂದ ರಾಜ್ಯ ಸರ್ಕಾರ ಆರಂಭಿಸಲಿದೆ.</p>.<p>ತಲಾ 12 ಎಕರೆ ಭೂಮಿ ಹಾಗೂ ಕೃಷಿಗೆ ಅಗತ್ಯವಾದ ಸೌಕರ್ಯಗಳನ್ನೆಲ್ಲ ಪಡೆಯುವ 50 ಮಂದಿ ನಿರುದ್ಯೋಗಿ ಕೃಷಿ ಪದವೀಧರರನ್ನು ಮೊದಲಿಗೆ ನೆಲೆಗೊಳಿಸಲಾಗುವುದು.</p>.<p>ಇಂದು ನಡೆದ ಮಂತ್ರಿಮಂಡಲದ ಸಭೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ 100 ಮಂದಿ ನಿರುದ್ಯೋಗಿಗಳನ್ನು ನೆಲೆಗೊಳಿಸುವ 60 ಲಕ್ಷ ರೂಪಾಯಿಯ ವಿಶೇಷ ಯೋಜನೆಯನ್ನು ಅಂಗೀಕರಿಸಿತು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಈ ಹಣವನ್ನು ಒದಗಿಸುವುದು, ರಾಜ್ಯ ಸರ್ಕಾರ ಈ ಹಣಕ್ಕೆ ಖಾತರಿ ನಿಲ್ಲುವುದು.</p>.<p><strong>ಎಕ್ಸೈಜ್ ತೆರಿಗೆ ರೂಪದಲ್ಲಿ ಶಿಕ್ಷಣ ಶುಲ್ಕ ವಸೂಲಿ ಅಕ್ರಮ: ಸುಪ್ರೀಂ ಕೋರ್ಟ್ ತೀರ್ಪು</strong></p>.<p>ನವದೆಹಲಿ, ನ. 18– ಅಬಕಾರಿ ಕಂಟ್ರಾಕ್ಟರುಗಳಿಂದ ಎಕ್ಸೈಜ್ ಸುಂಕವಾಗಿ ಶಿಕ್ಷಣ ಶುಲ್ಕ ವಸೂಲಿ ಮಾಡುವುದನ್ನು ರದ್ದುಗೊಳಿಸಿ ಮೈಸೂರು ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ನ ಸಂವಿಧಾನಕ್ಕೆ ಸಂಬಂಧಿಸಿದ ಬೆಂಚ್ ಇಂದು ಎತ್ತಿಹಿಡಿಯಿತು.</p>.<p>ಶಿಕ್ಷಣ ಶುಲ್ಕವನ್ನು ವಸೂಲಿ ಮಾಡಲು ರಾಜ್ಯ ಸರ್ಕಾರಕ್ಕೆ ಯಾವ ಅಧಿಕಾರವೂ ಇಲ್ಲವೆಂಬ ಹೈಕೋರ್ಟ್ನ ತೀರ್ಪನ್ನು ಬದಲಾಯಿಸಲು ಯಾವ ಕಾರಣವೂ ಇಲ್ಲವೆಂದು ತಿಳಿಸಿ, ನ್ಯಾಯಾಲಯವು ರಾಜ್ಯ ಸರ್ಕಾರದ ಅಪೀಲನ್ನು ವಜಾ ಮಾಡಿದೆ.</p>.<p>ಎಕ್ಸೈಜ್ ಸುಂಕದ ಅಂಗವಾಗಿ ಶಿಕ್ಷಣ ಶುಲ್ಕವನ್ನು ಮೈಸೂರು ಸರ್ಕಾರವು ಅಬಕಾರಿ ಕಂಟ್ರಾಕ್ಟರುಗಳಿಂದ ವಸೂಲಿ ಮಾಡುತ್ತಿದ್ದಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>