<p><strong>ಒತ್ತೆಯಾಳುಗಳ ಬದಲು ಬಂಧಿತ ಉಗ್ರಗಾಮಿಗಳ ಬಿಡುಗಡೆಗೆ ನಕಾರ</strong></p>.<p><strong>ನವದೆಹಲಿ, ಜುಲೈ 24 (ಪಿಟಿಐ)–</strong> ಕಾಶ್ಮೀರ ಕಣಿವೆಯಲ್ಲಿ ಅಲ್ ಫರಾನ್ ಉಗ್ರಗಾಮಿಗಳು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವ ಐವರು ವಿದೇಶಿ ಪ್ರವಾಸಿಗರ ಬಿಡುಗಡೆಗೆ ಬದಲಾಗಿ ಯಾವುದೇ ಉಗ್ರಗಾಮಿಗಳನ್ನು ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ಇಂದು ಹೇಳಿದೆ.</p>.<p>ವಿದೇಶಿ ಪ್ರವಾಸಿಗರನ್ನು ಉಗ್ರಗಾಮಿಗಳ ಕೈಯಿಂದ ರಕ್ಷಿಸಲು ಸರ್ವ ಪ್ರಯತ್ನ ಸಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ಉಗ್ರಗಾಮಿಗಳ ಬಿಡುಗಡೆ ಮಾತ್ರ ಸಾಧ್ಯವಿಲ್ಲ. ಈ ಸಂಬಂಧ ಸರ್ಕಾರದ ನಿಲುವು ಸ್ಪಷ್ಟವಾಗಿದೆ ಎಂದು ಕೇಂದ್ರ ಗೃಹ ಖಾತೆಯ ಕಾರ್ಯದರ್ಶಿ ಕೆ.ಪದ್ಮನಾಭಯ್ಯ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.</p>.<p><strong>ಪೊಲೀಸ್ ಅಧಿಕಾರಿಗಳಿಗೆ ಪೇಜರ್</strong></p>.<p><strong>ಬೆಂಗಳೂರು, ಜುಲೈ 24–</strong> ಪೊಲೀಸ್ ಇಲಾಖೆಯ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಸುವ್ಯವಸ್ಥಿತಗೊಳಿಸಲು ಡಿಸಿಪಿ ಹಾಗೂ ಮೇಲ್ಪಟ್ಟ ಅಧಿಕಾರಿಗಳಿಗೆ ಒಟ್ಟು 50 ಪೇಜರ್ ಉಪಕರಣಗಳನ್ನು ನೀಡಲಾಗಿದೆ. ಇನ್ನು ಮುಂದೆ ಪೊಲೀಸರು ತಮಗೆ ಸರಿಯಾದ ಸಂದರ್ಭದಲ್ಲಿ ಸಂದೇಶಗಳು ದೊರಕಲಿಲ್ಲ ಎಂದು ಗೊಣಗುವಂತಿಲ್ಲ ಹಾಗೂ ನೆವ ಹೇಳುವಂತಿಲ್ಲ.</p>.<p>ಸಂಪರ್ಕ ವ್ಯವಸ್ಥೆಯನ್ನು ಉತ್ತಮಗೊಳಿಸುವ ಮೊದಲ ಹಂತವಾಗಿ ಕೇವಲ ಹಿರಿಯ ಅಧಿಕಾರಿಗಳಿಗೆ ಈ ಉಪಕರಣವನ್ನು ನೀಡಲಾಗಿದ್ದು, ಇದರಿಂದ ಪೊಲೀಸ್ ಅಧಿಕಾರಿಗಳು ತಮ್ಮ ನಡುವೆಸಮನ್ವಯ ಸಾಧಿಸಲು ಸಾಧ್ಯವಾಗಲಿದೆ. ಅಷ್ಟೇ ಅಲ್ಲದೆ, ವೈರ್ಲೆಸ್ನಂಥ ಉಪಕರಣಕ್ಕಿಂತ ಇದು ಹಗುರವಾಗಿದ್ದು, ಅಧಿಕಾರಿಗಳು ಸುಲಭವಾಗಿ ಹಿಡಿದುಕೊಂಡು ತಿರುಗಾಡಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಒತ್ತೆಯಾಳುಗಳ ಬದಲು ಬಂಧಿತ ಉಗ್ರಗಾಮಿಗಳ ಬಿಡುಗಡೆಗೆ ನಕಾರ</strong></p>.<p><strong>ನವದೆಹಲಿ, ಜುಲೈ 24 (ಪಿಟಿಐ)–</strong> ಕಾಶ್ಮೀರ ಕಣಿವೆಯಲ್ಲಿ ಅಲ್ ಫರಾನ್ ಉಗ್ರಗಾಮಿಗಳು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವ ಐವರು ವಿದೇಶಿ ಪ್ರವಾಸಿಗರ ಬಿಡುಗಡೆಗೆ ಬದಲಾಗಿ ಯಾವುದೇ ಉಗ್ರಗಾಮಿಗಳನ್ನು ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ಇಂದು ಹೇಳಿದೆ.</p>.<p>ವಿದೇಶಿ ಪ್ರವಾಸಿಗರನ್ನು ಉಗ್ರಗಾಮಿಗಳ ಕೈಯಿಂದ ರಕ್ಷಿಸಲು ಸರ್ವ ಪ್ರಯತ್ನ ಸಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ಉಗ್ರಗಾಮಿಗಳ ಬಿಡುಗಡೆ ಮಾತ್ರ ಸಾಧ್ಯವಿಲ್ಲ. ಈ ಸಂಬಂಧ ಸರ್ಕಾರದ ನಿಲುವು ಸ್ಪಷ್ಟವಾಗಿದೆ ಎಂದು ಕೇಂದ್ರ ಗೃಹ ಖಾತೆಯ ಕಾರ್ಯದರ್ಶಿ ಕೆ.ಪದ್ಮನಾಭಯ್ಯ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.</p>.<p><strong>ಪೊಲೀಸ್ ಅಧಿಕಾರಿಗಳಿಗೆ ಪೇಜರ್</strong></p>.<p><strong>ಬೆಂಗಳೂರು, ಜುಲೈ 24–</strong> ಪೊಲೀಸ್ ಇಲಾಖೆಯ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಸುವ್ಯವಸ್ಥಿತಗೊಳಿಸಲು ಡಿಸಿಪಿ ಹಾಗೂ ಮೇಲ್ಪಟ್ಟ ಅಧಿಕಾರಿಗಳಿಗೆ ಒಟ್ಟು 50 ಪೇಜರ್ ಉಪಕರಣಗಳನ್ನು ನೀಡಲಾಗಿದೆ. ಇನ್ನು ಮುಂದೆ ಪೊಲೀಸರು ತಮಗೆ ಸರಿಯಾದ ಸಂದರ್ಭದಲ್ಲಿ ಸಂದೇಶಗಳು ದೊರಕಲಿಲ್ಲ ಎಂದು ಗೊಣಗುವಂತಿಲ್ಲ ಹಾಗೂ ನೆವ ಹೇಳುವಂತಿಲ್ಲ.</p>.<p>ಸಂಪರ್ಕ ವ್ಯವಸ್ಥೆಯನ್ನು ಉತ್ತಮಗೊಳಿಸುವ ಮೊದಲ ಹಂತವಾಗಿ ಕೇವಲ ಹಿರಿಯ ಅಧಿಕಾರಿಗಳಿಗೆ ಈ ಉಪಕರಣವನ್ನು ನೀಡಲಾಗಿದ್ದು, ಇದರಿಂದ ಪೊಲೀಸ್ ಅಧಿಕಾರಿಗಳು ತಮ್ಮ ನಡುವೆಸಮನ್ವಯ ಸಾಧಿಸಲು ಸಾಧ್ಯವಾಗಲಿದೆ. ಅಷ್ಟೇ ಅಲ್ಲದೆ, ವೈರ್ಲೆಸ್ನಂಥ ಉಪಕರಣಕ್ಕಿಂತ ಇದು ಹಗುರವಾಗಿದ್ದು, ಅಧಿಕಾರಿಗಳು ಸುಲಭವಾಗಿ ಹಿಡಿದುಕೊಂಡು ತಿರುಗಾಡಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>