ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಕೆಪಿಸಿಸಿ ಪುನರ್ರಚನೆಗೆ ಒಂದು ದಿನ ಮುಂಚೆ ಸೂರಜ್ಕುಂಡ್ನಲ್ಲಿ ಮಾಡಿದ ಭಾಷಣಕ್ಕೆ ವಿರುದ್ಧವಾಗಿಯೇ ಈ ಸಮಿತಿ ಇದೆ ಎಂದಿದ್ದಾರೆ. ಕೆಲವು ನಾಯಕರ ಮಕ್ಕಳಿಗೆ ಪದಾಧಿಕಾರಿ ಹುದ್ದೆಗಳನ್ನು ನೀಡಿರುವುದು ಮತ್ತು ದಕ್ಷಿಣ ಕನ್ನಡ ಜಿಲ್ಲೆಗೇ ಹೆಚ್ಚಿನ ಸ್ಥಾನ ನೀಡಲಾಗಿದೆ ಎಂದು ಹಲವರು ಟೀಕಿಸಿ, ಇದು ‘ಮಂಗಳೂರು ಪ್ರಾದೇಶಿಕ ಕಾಂಗ್ರೆಸ್ ಸಮಿತಿ’ ಎಂದು ವ್ಯಂಗ್ಯವಾಡಿದ್ದಾಗಿ ಗೊತ್ತಾಗಿದೆ.