<p><strong>ನವದೆಹಲಿ, ಆಗಸ್ಟ್ 15 (ಪಿಟಿಐ)–</strong> ದೂರಗಾಮಿ ಸಾಮರ್ಥ್ಯದ ‘ಅಗ್ನಿ–2’ ಕ್ಷಿಪಣಿ ಸದ್ಯದಲ್ಲೇ ದೇಶದ ಶಸ್ತ್ರಾಗಾರ ಸೇರಿಕೊಳ್ಳಲಿದೆ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಇಲ್ಲಿ ಘೋಷಿಸಿದರು.</p><p>ದೇಶದ 53ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಐತಿಹಾಸಿಕ ಕೆಂಪುಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾವು ಈಗ ಹಿಂದೆಂದಿಗಿಂತಲೂ ಪ್ರಬಲರಾಗಿದ್ದೇವೆ; ಪೊಖ್ರಾನ್ ಅಣುಸಾಧನ ಸ್ಫೋಟ ದೇಶಕ್ಕೆ ಅಗತ್ಯವಾದ ಸಾಮರ್ಥ್ಯ ಮತ್ತು ಆತ್ಮವಿಶ್ವಾಸವನ್ನು ನೀಡಿದೆ. ಭಾರಿ ಒತ್ತಡದ ಮಧ್ಯೆಯೂ ಅಗ್ನಿ–2 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದ್ದೇವೆ’ ಎಂದು ಹೇಳಿದರು.</p><p>ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲವನ್ನು ಸ್ಥಗಿತಗೊಳಿಸುವವರೆಗೆ ಆ ರಾಷ್ಟ್ರದ ಜತೆ ದ್ವಿಪಕ್ಷೀಯ ಮಾತುಕತೆ ಪುನರಾರಂಭಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.</p> <p><strong>ಹೃದಯ ವೈಶಾಲ್ಯ ಮೆರೆಯಲಿ: ಪಟೇಲ್</strong></p><p><strong>ಬೆಂಗಳೂರು, ಆಗಸ್ಟ್ 15–</strong> ಭಾರತೀಯರೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕಲು ಮನೋಭೂಮಿಕೆ ಸಿದ್ಧಪಡಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಇಂದು ಇಲ್ಲಿ ಕರೆ ನೀಡಿದರು.</p><p>‘ದೇಶದಲ್ಲಿ ಜಾತಿ, ಮತ, ಧರ್ಮ, ಭಾಷೆ ಹಾಗೂ ಪ್ರಾಂತ್ಯಗಳಂತಹ ಅತಿ ಸೂಕ್ಷ್ಮ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಿ ಸ್ಫೋಟಕ ಪರಿಸ್ಥಿತಿಗೆ ಅವಕಾಶವಾಗದಂತೆ ಹೃದಯ ವೈಶಾಲ್ಯ ಮೆರೆಯಬೇಕಿದೆ’ ಎಂದರು.</p><p>ಫೀಲ್ಡ್ ಮಾರ್ಷಲ್ ಮಾಣೆಕ್ಷಾ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿ ಮಾತನಾಡುತ್ತಿದ್ದ ಅವರು, ಗಡಿ ರೇಖೆಯನ್ನು ದಾಟಿ ಒಳನುಗ್ಗುವ ಶತ್ರುಗಳನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿದರೆ ದೇಶದ ಒಳಗಡೆ ಸಂಚು ನಡೆಸುತ್ತಿರುವ ಆಂತರಿಕ ಶತ್ರುಗಳನ್ನು ಹೊಣೆಗಾರಿಕೆಯಿಂದ ಪ್ರಜೆಗಳು ಹತ್ತಿಕ್ಕಬೇಕಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ, ಆಗಸ್ಟ್ 15 (ಪಿಟಿಐ)–</strong> ದೂರಗಾಮಿ ಸಾಮರ್ಥ್ಯದ ‘ಅಗ್ನಿ–2’ ಕ್ಷಿಪಣಿ ಸದ್ಯದಲ್ಲೇ ದೇಶದ ಶಸ್ತ್ರಾಗಾರ ಸೇರಿಕೊಳ್ಳಲಿದೆ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಇಲ್ಲಿ ಘೋಷಿಸಿದರು.</p><p>ದೇಶದ 53ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಐತಿಹಾಸಿಕ ಕೆಂಪುಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾವು ಈಗ ಹಿಂದೆಂದಿಗಿಂತಲೂ ಪ್ರಬಲರಾಗಿದ್ದೇವೆ; ಪೊಖ್ರಾನ್ ಅಣುಸಾಧನ ಸ್ಫೋಟ ದೇಶಕ್ಕೆ ಅಗತ್ಯವಾದ ಸಾಮರ್ಥ್ಯ ಮತ್ತು ಆತ್ಮವಿಶ್ವಾಸವನ್ನು ನೀಡಿದೆ. ಭಾರಿ ಒತ್ತಡದ ಮಧ್ಯೆಯೂ ಅಗ್ನಿ–2 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದ್ದೇವೆ’ ಎಂದು ಹೇಳಿದರು.</p><p>ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲವನ್ನು ಸ್ಥಗಿತಗೊಳಿಸುವವರೆಗೆ ಆ ರಾಷ್ಟ್ರದ ಜತೆ ದ್ವಿಪಕ್ಷೀಯ ಮಾತುಕತೆ ಪುನರಾರಂಭಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.</p> <p><strong>ಹೃದಯ ವೈಶಾಲ್ಯ ಮೆರೆಯಲಿ: ಪಟೇಲ್</strong></p><p><strong>ಬೆಂಗಳೂರು, ಆಗಸ್ಟ್ 15–</strong> ಭಾರತೀಯರೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕಲು ಮನೋಭೂಮಿಕೆ ಸಿದ್ಧಪಡಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಇಂದು ಇಲ್ಲಿ ಕರೆ ನೀಡಿದರು.</p><p>‘ದೇಶದಲ್ಲಿ ಜಾತಿ, ಮತ, ಧರ್ಮ, ಭಾಷೆ ಹಾಗೂ ಪ್ರಾಂತ್ಯಗಳಂತಹ ಅತಿ ಸೂಕ್ಷ್ಮ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಿ ಸ್ಫೋಟಕ ಪರಿಸ್ಥಿತಿಗೆ ಅವಕಾಶವಾಗದಂತೆ ಹೃದಯ ವೈಶಾಲ್ಯ ಮೆರೆಯಬೇಕಿದೆ’ ಎಂದರು.</p><p>ಫೀಲ್ಡ್ ಮಾರ್ಷಲ್ ಮಾಣೆಕ್ಷಾ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿ ಮಾತನಾಡುತ್ತಿದ್ದ ಅವರು, ಗಡಿ ರೇಖೆಯನ್ನು ದಾಟಿ ಒಳನುಗ್ಗುವ ಶತ್ರುಗಳನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿದರೆ ದೇಶದ ಒಳಗಡೆ ಸಂಚು ನಡೆಸುತ್ತಿರುವ ಆಂತರಿಕ ಶತ್ರುಗಳನ್ನು ಹೊಣೆಗಾರಿಕೆಯಿಂದ ಪ್ರಜೆಗಳು ಹತ್ತಿಕ್ಕಬೇಕಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>