<p><strong>ನವದೆಹಲಿ, ಮೇ 6</strong>– ರಾಜಕೀಯ ದೃಷ್ಟಿಯಿಂದ, ಆರ್ಥಿಕ ದೃಷ್ಟಿಯಿಂದ, ಮಿಲಿಟರಿ ದೃಷ್ಟಿಯಿಂದ ಭಾರತ ಬಲವಾಗಿರಬೇಕೆಂಬುದು ನಮ್ಮ ಇಚ್ಛೆ ಎಂದು ರಷ್ಯದ ಪ್ರಧಾನಿ ಅಲೆಕ್ಸಿ ಕೊಸಿಗಿನ್ ಇಂದು ಇಲ್ಲಿ ಸುದ್ದಿಗಾರರಿಗೆ ಹೇಳಿದ ಮಾತಿದು.</p>.<p>ಸಂಜೆ ಪಾರ್ಲಿಮೆಂಟ್ ಭವನದಲ್ಲಿ ಪ್ರಧಾನಿ ಇಂದಿರಾ ಗಾಂಧಿ ಜತೆ ಮಾತುಕತೆ ನಡೆಸಿದ ಕೊಸಿಗಿನ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.</p>.<p>ಡಾ. ಜಾಕಿರ್ ಹುಸೇನ್ ಅವರ ಅಂತಿಮ ಯಾತ್ರೆಯಲ್ಲಿ ಭಾಗವಹಿಸಲು ಕೊಸಿಗಿನ್ ನಿರ್ಧರಿಸಿದ್ದು ಕೊನೆ ಗಳಿಗೆಯಲ್ಲಿ. ಇದು ಇಲ್ಲಿನ ರಾಜಕೀಯ ವಲಯಗಳಲ್ಲಿ ಆಸಕ್ತಿ ಕೆರಳಿಸಿದೆ.</p>.<p><strong>ರಾಜ್ಯದ ಬಹು ಭಾಗದಲ್ಲಿ ಮಳೆ ಇಲ್ಲ; ಕುಡಿಯುವ ನೀರಿಗೂ ಕಷ್ಟ</strong></p>.<p><strong>ಬೆಂಗಳೂರು, ಮೇ 6–</strong> ಈ ವೇಳೆಗೆ ಬರಬೇಕಾಗಿದ್ದ ಭರಣಿ ಮಳೆ ರಾಜ್ಯದ ಬಹು ಭಾಗಗಳಲ್ಲಿ ಬಾರದೆ ಕೃಷಿ ಕೆಲಸ ತಡವಾಗಿರುವುದು ಮಾತ್ರವಲ್ಲ ಕುಡಿಯುವ ನೀರಿನ ಸಮಸ್ಯೆ ಬೃಹದಾಕಾರ ತಾಳಿದೆ.</p>.<p>ಬಿತ್ತನೆ ಮುನ್ನ ಉಳಲು ಅಗತ್ಯವಾದ ಮಳೆಗಾಗಿ ಜೂನ್ ತಿಂಗಳ ಕೊನೆಯವರೆಗೆ ಕಾಯಬಹುದಾದರೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಕಾರ್ಯಕ್ಕೆ ತ್ವರಿತ ಗಮನ ಕೊಡಬೇಕಾಗಿದ್ದು ರಾಜ್ಯ ಸರಕಾರ ಇತ್ತ ಜಿಲ್ಲಾಧಿಕಾರಿಗಳ ಗಮನ ಸೆಳೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ, ಮೇ 6</strong>– ರಾಜಕೀಯ ದೃಷ್ಟಿಯಿಂದ, ಆರ್ಥಿಕ ದೃಷ್ಟಿಯಿಂದ, ಮಿಲಿಟರಿ ದೃಷ್ಟಿಯಿಂದ ಭಾರತ ಬಲವಾಗಿರಬೇಕೆಂಬುದು ನಮ್ಮ ಇಚ್ಛೆ ಎಂದು ರಷ್ಯದ ಪ್ರಧಾನಿ ಅಲೆಕ್ಸಿ ಕೊಸಿಗಿನ್ ಇಂದು ಇಲ್ಲಿ ಸುದ್ದಿಗಾರರಿಗೆ ಹೇಳಿದ ಮಾತಿದು.</p>.<p>ಸಂಜೆ ಪಾರ್ಲಿಮೆಂಟ್ ಭವನದಲ್ಲಿ ಪ್ರಧಾನಿ ಇಂದಿರಾ ಗಾಂಧಿ ಜತೆ ಮಾತುಕತೆ ನಡೆಸಿದ ಕೊಸಿಗಿನ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.</p>.<p>ಡಾ. ಜಾಕಿರ್ ಹುಸೇನ್ ಅವರ ಅಂತಿಮ ಯಾತ್ರೆಯಲ್ಲಿ ಭಾಗವಹಿಸಲು ಕೊಸಿಗಿನ್ ನಿರ್ಧರಿಸಿದ್ದು ಕೊನೆ ಗಳಿಗೆಯಲ್ಲಿ. ಇದು ಇಲ್ಲಿನ ರಾಜಕೀಯ ವಲಯಗಳಲ್ಲಿ ಆಸಕ್ತಿ ಕೆರಳಿಸಿದೆ.</p>.<p><strong>ರಾಜ್ಯದ ಬಹು ಭಾಗದಲ್ಲಿ ಮಳೆ ಇಲ್ಲ; ಕುಡಿಯುವ ನೀರಿಗೂ ಕಷ್ಟ</strong></p>.<p><strong>ಬೆಂಗಳೂರು, ಮೇ 6–</strong> ಈ ವೇಳೆಗೆ ಬರಬೇಕಾಗಿದ್ದ ಭರಣಿ ಮಳೆ ರಾಜ್ಯದ ಬಹು ಭಾಗಗಳಲ್ಲಿ ಬಾರದೆ ಕೃಷಿ ಕೆಲಸ ತಡವಾಗಿರುವುದು ಮಾತ್ರವಲ್ಲ ಕುಡಿಯುವ ನೀರಿನ ಸಮಸ್ಯೆ ಬೃಹದಾಕಾರ ತಾಳಿದೆ.</p>.<p>ಬಿತ್ತನೆ ಮುನ್ನ ಉಳಲು ಅಗತ್ಯವಾದ ಮಳೆಗಾಗಿ ಜೂನ್ ತಿಂಗಳ ಕೊನೆಯವರೆಗೆ ಕಾಯಬಹುದಾದರೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಕಾರ್ಯಕ್ಕೆ ತ್ವರಿತ ಗಮನ ಕೊಡಬೇಕಾಗಿದ್ದು ರಾಜ್ಯ ಸರಕಾರ ಇತ್ತ ಜಿಲ್ಲಾಧಿಕಾರಿಗಳ ಗಮನ ಸೆಳೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>