ನವದೆಹಲಿ, ಫೆ. 28– ಅಂಚೆ ಸಾಮಗ್ರಿಗಳು ಇನ್ನಷ್ಟು ತುಟ್ಟಿ, ಬೀಡಿ, ಸಿಗರೇಟಿನ ಮೇಲೆ ಹೆಚ್ಚು ತೆರಿಗೆ, ವರಮಾನ ತೆರಿಗೆದಾರರಿಗೆ ಕೊಂಚ ಪರಿಹಾರ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚು ಒತ್ತು– ಇವು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರು ಮಂಡಿಸಿದ 1997–98ನೇ ಸಾಲಿನ, ಸರ್ವರನ್ನೂ ಸುಪ್ರೀತಗೊಳಿಸುವ ಬಜೆಟ್ನ ಮುಖ್ಯ ರೂಪುರೇಷೆಗಳು.