<p><strong>ಪಟೇಲ್ ಬದಲಾವಣೆಗೆ ದಳ ಭಿನ್ನರ ಪಟ್ಟು</strong></p>.<p><strong>ಬೆಂಗಳೂರು, ನ. 29</strong>–‘ರಾಜ್ಯದಲ್ಲಿ ಮುಖ್ಯಮಂತ್ರಿ ಜೆ.ಎಚ್.ಪಟೇಲರ ನಾಯಕತ್ವ ಬದಲಾಗಬೇಕು; ಇದು ನಮ್ಮ ಬಿಡದ ಪಟ್ಟು’ ಹೀಗೆಂದವರು ಭಿನ್ನಮತೀಯ ಗುಂಪಿನ ನಾಯಕರಾದ ವೈಜನಾಥ ಪಾಟೀಲ್.</p>.<p>‘ಈ ಬಾರಿ ನಾಯಕತ್ವದಲ್ಲಿ ಬದಲಾವಣೆ ಆಗಬೇಕು ಎಂಬ ವಿಚಾರದಲ್ಲಿ ಯಾವುದೇ ರಾಜಿಯೂ ಇಲ್ಲ. ಅದಕ್ಕೆಂದೇ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಒತ್ತಾಯಿಸಿ ಮನವಿ ಕೊಟ್ಟಿದ್ದೇವೆ. ಈ ಸಭೆ ಕರೆಯುವಂತೆ ಒತ್ತಾಯಿಸುವುದು ಶಾಸಕರಾಗಿ ನಮ್ಮ ಹಕ್ಕು. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ’ ಎಂದು ಅವರು ಈ ಸಂಬಂಧ ಕೇಳಿಬಂದಿರುವ ಟೀಕೆಗೆ ಪ್ರತಿಕ್ರಿಯಿಸಿದರು.</p>.<p>ಶಾಸಕಾಂಗ ಪಕ್ಷದ ನಾಯಕತ್ವದಲ್ಲಿ ಅವಿಶ್ವಾಸ ವ್ಯಕ್ತಪಡಿಸಿ ಶಾಸಕಾಂಗದ ಸಭೆ ಕರೆಯುವಂತೆ ಮುಖ್ಯಮಂತ್ರಿ ಜೆ.ಎಚ್.ಪಟೇಲರನ್ನು ಒತ್ತಾಯಿಸಿರುವ 23 ಶಾಸಕರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾ ರೋಪಾಯ ರೂಪಿಸುವುದಕ್ಕಾಗಿ ರಚನೆ ಆಗಿದೆ ಎನ್ನಲಾದ ಸಚಿವ ಸಮಿತಿಯ ವಿಚಾರ ತಮಗೆ ಇನ್ನೂ ಅಧಿಕೃತವಾಗಿ ಗೊತ್ತಾಗಿಲ್ಲ ಎಂದರು.</p>.<p><strong>ಸರ್ವನದಿ ಸಂಪರ್ಕ ಅಧ್ಯಯನಕ್ಕೆ ಸಮಿತಿ ರಚನೆ: ಪ್ರಧಾನಿ</strong></p>.<p><strong>ನವದೆಹಲಿ, ನ. 29 (ಪಿಟಿಐ)–</strong> ದೇಶದ ಪ್ರಮುಖ ನದಿಗಳನ್ನು ಸೇರಿಸಿ ಕೊರತೆಯುಳ್ಳ ಪ್ರದೇಶಗಳಿಗೆ ನೀರು ಪೂರೈಸುವ ಬಗೆಗೆ ಅಧ್ಯಯನ ನಡೆಸಲು ತಜ್ಞರ ಸಮಿತಿಯೊಂದನ್ನು ಕೇಂದ್ರ ಸರ್ಕಾರ ರಚಿಸಿದೆ ಎಂದು ಪ್ರಧಾನಿ ಎಚ್.ಡಿ. ದೇವೇಗೌಡರು ಇಂದು ಲೋಕಸಭೆಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟೇಲ್ ಬದಲಾವಣೆಗೆ ದಳ ಭಿನ್ನರ ಪಟ್ಟು</strong></p>.<p><strong>ಬೆಂಗಳೂರು, ನ. 29</strong>–‘ರಾಜ್ಯದಲ್ಲಿ ಮುಖ್ಯಮಂತ್ರಿ ಜೆ.ಎಚ್.ಪಟೇಲರ ನಾಯಕತ್ವ ಬದಲಾಗಬೇಕು; ಇದು ನಮ್ಮ ಬಿಡದ ಪಟ್ಟು’ ಹೀಗೆಂದವರು ಭಿನ್ನಮತೀಯ ಗುಂಪಿನ ನಾಯಕರಾದ ವೈಜನಾಥ ಪಾಟೀಲ್.</p>.<p>‘ಈ ಬಾರಿ ನಾಯಕತ್ವದಲ್ಲಿ ಬದಲಾವಣೆ ಆಗಬೇಕು ಎಂಬ ವಿಚಾರದಲ್ಲಿ ಯಾವುದೇ ರಾಜಿಯೂ ಇಲ್ಲ. ಅದಕ್ಕೆಂದೇ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಒತ್ತಾಯಿಸಿ ಮನವಿ ಕೊಟ್ಟಿದ್ದೇವೆ. ಈ ಸಭೆ ಕರೆಯುವಂತೆ ಒತ್ತಾಯಿಸುವುದು ಶಾಸಕರಾಗಿ ನಮ್ಮ ಹಕ್ಕು. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ’ ಎಂದು ಅವರು ಈ ಸಂಬಂಧ ಕೇಳಿಬಂದಿರುವ ಟೀಕೆಗೆ ಪ್ರತಿಕ್ರಿಯಿಸಿದರು.</p>.<p>ಶಾಸಕಾಂಗ ಪಕ್ಷದ ನಾಯಕತ್ವದಲ್ಲಿ ಅವಿಶ್ವಾಸ ವ್ಯಕ್ತಪಡಿಸಿ ಶಾಸಕಾಂಗದ ಸಭೆ ಕರೆಯುವಂತೆ ಮುಖ್ಯಮಂತ್ರಿ ಜೆ.ಎಚ್.ಪಟೇಲರನ್ನು ಒತ್ತಾಯಿಸಿರುವ 23 ಶಾಸಕರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾ ರೋಪಾಯ ರೂಪಿಸುವುದಕ್ಕಾಗಿ ರಚನೆ ಆಗಿದೆ ಎನ್ನಲಾದ ಸಚಿವ ಸಮಿತಿಯ ವಿಚಾರ ತಮಗೆ ಇನ್ನೂ ಅಧಿಕೃತವಾಗಿ ಗೊತ್ತಾಗಿಲ್ಲ ಎಂದರು.</p>.<p><strong>ಸರ್ವನದಿ ಸಂಪರ್ಕ ಅಧ್ಯಯನಕ್ಕೆ ಸಮಿತಿ ರಚನೆ: ಪ್ರಧಾನಿ</strong></p>.<p><strong>ನವದೆಹಲಿ, ನ. 29 (ಪಿಟಿಐ)–</strong> ದೇಶದ ಪ್ರಮುಖ ನದಿಗಳನ್ನು ಸೇರಿಸಿ ಕೊರತೆಯುಳ್ಳ ಪ್ರದೇಶಗಳಿಗೆ ನೀರು ಪೂರೈಸುವ ಬಗೆಗೆ ಅಧ್ಯಯನ ನಡೆಸಲು ತಜ್ಞರ ಸಮಿತಿಯೊಂದನ್ನು ಕೇಂದ್ರ ಸರ್ಕಾರ ರಚಿಸಿದೆ ಎಂದು ಪ್ರಧಾನಿ ಎಚ್.ಡಿ. ದೇವೇಗೌಡರು ಇಂದು ಲೋಕಸಭೆಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>