ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಗುರುವಾರ, ಜೂನ್‌ 26, 1997

Last Updated 25 ಜೂನ್ 2022, 19:31 IST
ಅಕ್ಷರ ಗಾತ್ರ

ಕೇಂದ್ರದಲ್ಲಿ ಮತ್ತೆ ರೈತರ ಸರ್ಕಾರ: ಗೌಡರ ಪಣ

ಕೃಷ್ಣರಾಜ ಸಾಗರ (ಮಂಡ್ಯ ಜಿಲ್ಲೆ) ಜೂನ್‌ 25 – ‘ಕೇಂದ್ರದಲ್ಲಿ ರೈತರ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲು ಪಣ ತೊಟ್ಟು ಕೆಲಸ ಮಾಡುವೆ. ಇದಕ್ಕಾಗಿ ಇದೇ ಜುಲೈನಿಂದ ದೇಶದಾದ್ಯಂತ ಪ್ರವಾಸ ಮಾಡುವೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಬುಧವಾರ ಇಲ್ಲಿ ತಿಳಿಸಿದರು.‌

ನವೀಕರಣಗೊಂಡಿರುವ ವಿಶ್ವೇಶ್ವೆರಯ್ಯ ನಾಲೆಗೆ ಕೃಷ್ಣರಾಜಸಾಗರದಿಂದ ನೀರು ಹರಿಸಿದ ಬಳಿಕ ಸಾರ್ವಜನಿಕ ಸಭೆಯುನ್ನುದ್ದೇಶಿಸಿ ಅವರು ಮಾತನಾಡಿದರು.

‘ಅಧಿಕಾರ ಹೋಯಿತು ಎಂದು ಸುಮ್ಮನೆ ಕೂರುವವ ನಾನಲ್ಲ. ಮತ್ತೆ ಧೂಳಿನಿಂದೆದ್ದು ಬರುವೆ ಎಂದು ಸಂಸತ್ತಿನಲ್ಲಿ ಹೇಳಿದ್ದೆ. ಯಾವ ಪ್ರೇರಣೆಯಿಂದ ಎಂಬುದು ಗೊತ್ತಿಲ್ಲ. ಅಂದು ಈ ಮಾತು ತಾನಾಗಿ ಬಂದಿತ್ತು. ಇದೆಲ್ಲ ಏನೇ ಇರಲಿ. ಕೇಂದ್ರದಲ್ಲಿ ಮತ್ತೆ ರೈತರ ಸರ್ಕಾರ ತರುವುದು ಅಗತ್ಯವಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT