ಮಂಡ್ಯ ಜಿಲ್ಲಾ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಕನ್ನಂಬಾಡಿಯಲ್ಲಿ ಕೆಲ ಜನ ನಡೆಸಿದ ದಾಂಧಲೆ, ಬೆಂಕಿ, ಗಲಾಟೆ ಮೊದಲಾದ ಪ್ರಕರಣ ಪ್ರಸ್ತಾಪಿಸಿದ ಅವರು 1979ರಲ್ಲಿ ಆದ ವರುಣಾ ನಾಲೆ ಒಪ್ಪಂದಕ್ಕೆ ಮಂಡ್ಯ ಜಿಲ್ಲೆಯ ಅನೇಕ ಪ್ರಮುಖರು ಸಹಿಹಾಕಿರುತ್ತಾರೆ. ಆ ರೀತಿ ಸಹಿ ಹಾಕಿದವರಲ್ಲಿ ಮಾಜಿ ಸಂಸತ್ ಸದಸ್ಯ ಜಿ.ಮಾದೇಗೌಡ ಕೂಡ ಒಬ್ಬರಿದ್ದಿರಬಹುದು ಎಂದರು.