ಪ್ರಜಾವಾಣಿ 25 ವರ್ಷಗಳ ಹಿಂದೆ| ಬುಧವಾರ 14–02–1996

ಅನುಕಂಪದ ನೌಕರಿ ಸರ್ಕಾರದ ಕಳಕಳಿ
ಬೆಂಗಳೂರು, ಫೆ. 13–ಸರ್ಕಾರಿ ಸೇವೆಯಲ್ಲಿರುವಾಗಲೇ ಅಸುನೀಗುವ ನೌಕರರ ಕುಟುಂಬದವರಲ್ಲಿ ಒಬ್ಬರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡುವ ಬಗ್ಗೆ ರಾಜ್ಯ ಸರ್ಕಾರ ತೀವ್ರ ಕಳಕಳಿಯನ್ನು ಹೊಂದಿದ್ದು, ಇನ್ನು ಎರಡು ತಿಂಗಳ ಒಳಗಾಗಿ ಈ ಸಂಬಂಧದಲ್ಲಿ ಆದೇಶವನ್ನು ಹೊರಡಿಸಲಿದೆ.
ಸರ್ಕಾರ ಈ ನಿಟ್ಟಿನಲ್ಲಿ ಕೈಗೊಳ್ಳುವ ನಿರ್ಧಾರ, ಸಂಸಾರದ ನೊಗವನ್ನು ಹೆಗಲಿಗೇರಿಸಿಕೊಂಡಿದ್ದ ಮನೆ ಒಡೆಯನನ್ನು ಕಳೆದುಕೊಂಡ ನತದೃಷ್ಟರ ಪಾಲಿಗೆ ಒಂದು ವಿಧದಲ್ಲಿ ಮುಂದಿನ ಬದುಕಿಗೆ ಆಶಾಕಿರಣ ಆಗಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.