<p id="thickbox_headline"><strong>ನಗರದ ಕಾಲೇಜುಗಳು ಅನಿರ್ದಿಷ್ಟ ಕಾಲ ಬಂದ್</strong></p>.<p><strong>ಬೆಂಗಳೂರು, ಸೆ. 14– </strong>ಬೆಂಗಳೂರು ವಿಶ್ವ ವಿದ್ಯಾಲಯಕ್ಕೆ ಸೇರಿರುವ ನಗರದಲ್ಲಿನ ಕಾಲೇಜುಗಳನ್ನು ಅನಿರ್ದಿಷ್ಟಕಾಲದವರೆವಿಗೆ ಮುಚ್ಚಬೇಕೆಂದು ಇಂದು ಸಂಜೆ ನಡೆದ ಕಾಲೇಜು ಪ್ರಿನ್ಸಿಪಲ್ಗಳ ಸಭೆ ತೀರ್ಮಾನಿಸಿತು.</p>.<p>ಕೆಲವು ಶಕ್ತಿಗಳು ಬಿಕ್ಕಟ್ಟನ್ನು ಸೃಷ್ಟಿಸಿರು ವುದರಿಂದ ತಮ್ಮ ಸಂಸ್ಥೆಗಳಲ್ಲಿ ಕೆಲಸ ಕಾರ್ಯ ಗಳನ್ನು ನಿರ್ವಹಿಸಲು ಸಾಧ್ಯವಾಗು ತ್ತಿಲ್ಲ ಎಂಬುದು ಪ್ರಿನ್ಸಿಪಲ್ಗಳ ಒಮ್ಮತದ ಅಭಿಪ್ರಾಯವಾಗಿತ್ತು.</p>.<p>ವಿದ್ಯಾರ್ಥಿಗಳ ಮುಷ್ಕರದಿಂದ ಕಳೆದ ಎರಡುಮೂರು ದಿವಸಗಳ ಗಲಭೆಯಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಪರಿಶೀಲಿಸಲು ಉಪ ಕುಲಪತಿ ಶ್ರೀ ಟಿ.ಕೆ. ತುಕೋಳ್ ಅವರು ಪ್ರಿನ್ಸಿಪಲ್ಗಳ ಸಭೆಯನ್ನು ಕರೆದಿದ್ದರು.</p>.<p><strong>ಹುಬ್ಬಳ್ಳಿ–ಕಾರವಾರ ನಡುವೆ ಹೊಸ ರೈಲು ಮಾರ್ಗ: ಮಳೆಗಾಲದ ನಂತರ ಸಮೀಕ್ಷೆ</strong></p>.<p><strong>ಹೈದರಾಬಾದ್, ಸೆ. 14– </strong>ಹುಬ್ಬಳ್ಳಿಯಿಂದ ಕಾರವಾರದವರೆಗೆ ಹೊಸ ಮಾರ್ಗ ನಿರ್ಮಿಸುವ ಬಗ್ಗೆ ಮಳೆಗಾಲ ಮುಗಿದ ಕೂಡಲೇ ಎಂಜಿನಿಯರಿಂಗ್ ಮತ್ತು ಸಂಚಾರಕ್ಕೆ ಸಂಬಂಧಿಸಿದ ಪೂರ್ವಭಾವಿ ಸಮೀಕ್ಷೆ ಕಾರ್ಯ ಆರಂಭಿಸಲಾಗುವುದೆಂದು ದಕ್ಷಿಣ ಮಧ್ಯೆ ರೈಲ್ವೆಯ ಜನರಲ್ ಮ್ಯಾನೇಜರ್ ಎಂ.ಟಿ. ಲೀ ಅವರು ಇಂದು ಇಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p id="thickbox_headline"><strong>ನಗರದ ಕಾಲೇಜುಗಳು ಅನಿರ್ದಿಷ್ಟ ಕಾಲ ಬಂದ್</strong></p>.<p><strong>ಬೆಂಗಳೂರು, ಸೆ. 14– </strong>ಬೆಂಗಳೂರು ವಿಶ್ವ ವಿದ್ಯಾಲಯಕ್ಕೆ ಸೇರಿರುವ ನಗರದಲ್ಲಿನ ಕಾಲೇಜುಗಳನ್ನು ಅನಿರ್ದಿಷ್ಟಕಾಲದವರೆವಿಗೆ ಮುಚ್ಚಬೇಕೆಂದು ಇಂದು ಸಂಜೆ ನಡೆದ ಕಾಲೇಜು ಪ್ರಿನ್ಸಿಪಲ್ಗಳ ಸಭೆ ತೀರ್ಮಾನಿಸಿತು.</p>.<p>ಕೆಲವು ಶಕ್ತಿಗಳು ಬಿಕ್ಕಟ್ಟನ್ನು ಸೃಷ್ಟಿಸಿರು ವುದರಿಂದ ತಮ್ಮ ಸಂಸ್ಥೆಗಳಲ್ಲಿ ಕೆಲಸ ಕಾರ್ಯ ಗಳನ್ನು ನಿರ್ವಹಿಸಲು ಸಾಧ್ಯವಾಗು ತ್ತಿಲ್ಲ ಎಂಬುದು ಪ್ರಿನ್ಸಿಪಲ್ಗಳ ಒಮ್ಮತದ ಅಭಿಪ್ರಾಯವಾಗಿತ್ತು.</p>.<p>ವಿದ್ಯಾರ್ಥಿಗಳ ಮುಷ್ಕರದಿಂದ ಕಳೆದ ಎರಡುಮೂರು ದಿವಸಗಳ ಗಲಭೆಯಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಪರಿಶೀಲಿಸಲು ಉಪ ಕುಲಪತಿ ಶ್ರೀ ಟಿ.ಕೆ. ತುಕೋಳ್ ಅವರು ಪ್ರಿನ್ಸಿಪಲ್ಗಳ ಸಭೆಯನ್ನು ಕರೆದಿದ್ದರು.</p>.<p><strong>ಹುಬ್ಬಳ್ಳಿ–ಕಾರವಾರ ನಡುವೆ ಹೊಸ ರೈಲು ಮಾರ್ಗ: ಮಳೆಗಾಲದ ನಂತರ ಸಮೀಕ್ಷೆ</strong></p>.<p><strong>ಹೈದರಾಬಾದ್, ಸೆ. 14– </strong>ಹುಬ್ಬಳ್ಳಿಯಿಂದ ಕಾರವಾರದವರೆಗೆ ಹೊಸ ಮಾರ್ಗ ನಿರ್ಮಿಸುವ ಬಗ್ಗೆ ಮಳೆಗಾಲ ಮುಗಿದ ಕೂಡಲೇ ಎಂಜಿನಿಯರಿಂಗ್ ಮತ್ತು ಸಂಚಾರಕ್ಕೆ ಸಂಬಂಧಿಸಿದ ಪೂರ್ವಭಾವಿ ಸಮೀಕ್ಷೆ ಕಾರ್ಯ ಆರಂಭಿಸಲಾಗುವುದೆಂದು ದಕ್ಷಿಣ ಮಧ್ಯೆ ರೈಲ್ವೆಯ ಜನರಲ್ ಮ್ಯಾನೇಜರ್ ಎಂ.ಟಿ. ಲೀ ಅವರು ಇಂದು ಇಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>