ಬೆಂಗಳೂರು, ಆ. 27– 3 ತಿಂಗಳ ಅಧಿಕಾರ ಪೂರ್ಣಗೊಳಿಸುವ ಹೊಸ್ತಿಲಲ್ಲಿರುವ ಜೆ.ಎಚ್. ಪಟೇಲ್ ನೇತೃತ್ವದ ಸಚಿವ ಸಂಪುಟದ ಮೇಲೆ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಅನಿರೀಕ್ಷಿತವಾಗಿ ನಡೆದ ಧರಣಿ, ಕೋಲಾಹಲದ ನಡುವೆ ಇಂದು ವಿಧಾನಸಭೆ ಯಲ್ಲಿ ಧ್ವನಿಮತದಿಂದ ಬಿದ್ದುಹೋಯಿತು.
ಮುಖ್ಯಮಂತ್ರಿ ಪಟೇಲ್ ಅವರ ಉತ್ತರಕ್ಕಾಗಿ ಕಾದಿದ್ದ ಕ್ಷಣದಲ್ಲಿ ಎಂಇಎಸ್ ಹಾಗೂ ಬೆಳಗಾವಿಯ ಕಾಂಗ್ರೆಸ್ ಸದಸ್ಯರು ಕಬ್ಬಿನ ಸಮಸ್ಯೆ ಹಿನ್ನೆಲೆಯಲ್ಲಿ ಹೂಡಿದ ಧರಣಿಯಿಂದ ಕೋಲಾಹಲ ಉಂಟಾಯಿತು.