<p><strong>ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಧರ್ಮಸಿಂಗ್ ನೇಮಕ</strong></p>.<p><strong>ನವದೆಹಲಿ, ನ. 6–</strong> ಕಳೆ ಗುಂದಿದ್ದ ಕಾಂಗ್ರೆಸ್ಸನ್ನು ಪುನಶ್ಚೇತನಗೊಳಿಸುವ ಕಾರ್ಯವನ್ನು ಕೈಗೊಂಡಿರುವ ಎಐಸಿಸಿ ಅಧ್ಯಕ್ಷ ಸೀತಾರಾಂ ಕೇಸರಿ ಅವರು ಮಾಜಿ ಸಚಿವ ಧರ್ಮಸಿಂಗ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.</p>.<p>ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ಹಿನ್ನೆಲೆಯಲ್ಲಿ ನಾಯ್ಕರ್ ರಾಜೀನಾಮೆ ನೀಡಲು ಮುಂದೆ ಬಂದಿದ್ದರು ಅವರು ಈಗ ರಾಜೀನಾಮೆ ನೀಡಿದ್ದರೆನ್ನಲಾಗಿದೆ. ನಾಯ್ಕರ್ ಅವರು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಿ ಹೊಸ ನೇಮಕ ಮಾಡಿರುವುದನ್ನು ಪಕ್ಷದ ವಕ್ತಾರ ವಿ.ಎನ್. ಗಾಡ್ಗೀಳ್ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.</p>.<p>ಧರ್ಮಸಿಂಗ್ ಅವರ ನೇಮಕವನ್ನು ಪ್ರಕಟ ಮಾಡುವ ಮುನ್ನ ನಾಯ್ಕರ್ ಸಂಜೆ ಬೆಂಗಳೂರಿಗೆ ಮರಳಿದರು.</p>.<p><strong>ಭಾರತಕ್ಕೆ ಟೈಟನ್ ಕಪ್</strong></p>.<p><strong>ಮುಂಬೈ, ನ.6–</strong> ಕೆಚ್ಚೆದೆಯಿಂದ ಹೋರಾಡಿದ ಭಾರತದ ತಂಡದವರು ಇದುವರೆಗೆ ಅಜೇಯರಾಗಿದ್ದ ದಕ್ಷಿಣ ಆಫ್ರಿಕ ತಂಡದವರಿಗೆ 35 ರನ್ಗಳ ಸೋಲಿನ ಕಹಿ ಉಣಿಸಿ ಟೈಟನ್ ಕಪ್ ಕ್ರಿಕೆಟ್ ಟೂರ್ನಿ ಪ್ರಶಸ್ತಿ ಪಡೆದು ಬಹಳ ದಿನಗಳಿಂದ ನಿರಾಶರಾಗಿದ್ದ ಅಭಿಮಾನಿಗಳು ಇಂದು ರಾತ್ರಿ ಹುಚ್ಚೆದ್ದು ಕುಣಿಯುವಂತೆ ಮಾಡಿದರು.</p>.<p><strong>ಲಕ್ಕೂಬಾಯಿ ವಂಚನೆ ಹಗರಣ ರಾವ್ಗೆ ಷರತ್ತಿನ ಜಾಮೀನು</strong></p>.<p><strong>ನವದೆಹಲಿ, ನ. 6 (ಪಿಟಿಐ)– </strong>ಲಕ್ಕೂಬಾಯಿ ವಂಚನೆ ಹಗರಣದಲ್ಲಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರಿಗೆ ದೆಹಲಿ ನ್ಯಾಯಾಲಯ ಒಂದು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಭದ್ರತೆ ನೀಡುವ ಷರತ್ತು ವಿಧಿಸಿ ಜಾಮೀನು ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಧರ್ಮಸಿಂಗ್ ನೇಮಕ</strong></p>.<p><strong>ನವದೆಹಲಿ, ನ. 6–</strong> ಕಳೆ ಗುಂದಿದ್ದ ಕಾಂಗ್ರೆಸ್ಸನ್ನು ಪುನಶ್ಚೇತನಗೊಳಿಸುವ ಕಾರ್ಯವನ್ನು ಕೈಗೊಂಡಿರುವ ಎಐಸಿಸಿ ಅಧ್ಯಕ್ಷ ಸೀತಾರಾಂ ಕೇಸರಿ ಅವರು ಮಾಜಿ ಸಚಿವ ಧರ್ಮಸಿಂಗ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.</p>.<p>ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ಹಿನ್ನೆಲೆಯಲ್ಲಿ ನಾಯ್ಕರ್ ರಾಜೀನಾಮೆ ನೀಡಲು ಮುಂದೆ ಬಂದಿದ್ದರು ಅವರು ಈಗ ರಾಜೀನಾಮೆ ನೀಡಿದ್ದರೆನ್ನಲಾಗಿದೆ. ನಾಯ್ಕರ್ ಅವರು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಿ ಹೊಸ ನೇಮಕ ಮಾಡಿರುವುದನ್ನು ಪಕ್ಷದ ವಕ್ತಾರ ವಿ.ಎನ್. ಗಾಡ್ಗೀಳ್ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.</p>.<p>ಧರ್ಮಸಿಂಗ್ ಅವರ ನೇಮಕವನ್ನು ಪ್ರಕಟ ಮಾಡುವ ಮುನ್ನ ನಾಯ್ಕರ್ ಸಂಜೆ ಬೆಂಗಳೂರಿಗೆ ಮರಳಿದರು.</p>.<p><strong>ಭಾರತಕ್ಕೆ ಟೈಟನ್ ಕಪ್</strong></p>.<p><strong>ಮುಂಬೈ, ನ.6–</strong> ಕೆಚ್ಚೆದೆಯಿಂದ ಹೋರಾಡಿದ ಭಾರತದ ತಂಡದವರು ಇದುವರೆಗೆ ಅಜೇಯರಾಗಿದ್ದ ದಕ್ಷಿಣ ಆಫ್ರಿಕ ತಂಡದವರಿಗೆ 35 ರನ್ಗಳ ಸೋಲಿನ ಕಹಿ ಉಣಿಸಿ ಟೈಟನ್ ಕಪ್ ಕ್ರಿಕೆಟ್ ಟೂರ್ನಿ ಪ್ರಶಸ್ತಿ ಪಡೆದು ಬಹಳ ದಿನಗಳಿಂದ ನಿರಾಶರಾಗಿದ್ದ ಅಭಿಮಾನಿಗಳು ಇಂದು ರಾತ್ರಿ ಹುಚ್ಚೆದ್ದು ಕುಣಿಯುವಂತೆ ಮಾಡಿದರು.</p>.<p><strong>ಲಕ್ಕೂಬಾಯಿ ವಂಚನೆ ಹಗರಣ ರಾವ್ಗೆ ಷರತ್ತಿನ ಜಾಮೀನು</strong></p>.<p><strong>ನವದೆಹಲಿ, ನ. 6 (ಪಿಟಿಐ)– </strong>ಲಕ್ಕೂಬಾಯಿ ವಂಚನೆ ಹಗರಣದಲ್ಲಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರಿಗೆ ದೆಹಲಿ ನ್ಯಾಯಾಲಯ ಒಂದು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಭದ್ರತೆ ನೀಡುವ ಷರತ್ತು ವಿಧಿಸಿ ಜಾಮೀನು ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>