ಬೆಂಗಳೂರು, ಮೇ.10– ಭಿನ್ನಮತೀಯರ ತೀವ್ರ ಅಸಮಾಧಾನದ ನಡುವೆ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ಚುನಾವಣಾ ಕಣದಲ್ಲಿದ್ದ ಇಬ್ಬರು ಅಭ್ಯರ್ಥಿಗಳ ಮನವೊಲಿಸಿದ ಫಲವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆಪ್ತ ಸಂಸದ ಬಿ.ಎಲ್.ಶಂಕರ್ ಅವರು ರಾಜ್ಯ ಜನತಾದಳದ ಅಧ್ಯಕ್ಷರಾಗಿ ಅವಿರೋಧವಾಗಿ ಇಂದು ಆಯ್ಕೆಯಾದರು.
ಈ ಆಯ್ಕೆಯೊಂದಿಗೆ ಕಳೆದ ಒಂದು ವಾರದಿಂದ ಕಾಡಿದ್ದ ಪಕ್ಷದಲ್ಲಿನ ಗೊಂದಲಕ್ಕೆ ಅಂತಿಮ ತೆರೆ ಎಳೆದಂತಾಗಿದೆ.
ಭಿನ್ನಮತೀಯ ಮುಖಂಡ ಹಾಗೂ ಮಾಜಿ ಸಚಿವ ಬಿ.ಆರ್.ಯಾವಗಲ್ ಹಾಗೂ ಮಾಜಿ ಶಾಸಕ ಬಿ.ಆರ್.ನೀಲಕಂಠಪ್ಪ ಅವರು ಸ್ಪರ್ಧೆಯಿಂದ ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡರು.
ಇರಾನ್ ಭೂಕಂಪ: 1 ಸಾವಿರ ಸಾವು
ದುಬೈ, ಮೇ.10 (ಪಿಟಿಐ)– ಇರಾನಿನ ಖೋರಸಾನ್ ಪ್ರಾಂತ್ಯದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಭಾರಿ ಭೂಕಂಪದಲ್ಲಿ ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.