ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಶನಿವಾರ 2.11.1996

Last Updated 1 ನವೆಂಬರ್ 2021, 22:00 IST
ಅಕ್ಷರ ಗಾತ್ರ

ಪ್ರಧಾನಿಯಿಂದ ನೈರುತ್ಯ ರೈಲ್ವೆ ವಲಯ ಉದ್ಘಾಟನೆ

ಬೆಂಗಳೂರು, ನ. 1– ರಾಜ್ಯದ ಪುನರ್ ವಿಂಗಡಣೆಯಾದ ನಂತರ ಜನತೆಯ ಹಲವು ವರ್ಷಗಳ ಕನಸಾಗಿದ್ದ ನೈರುತ್ಯ
ರೈಲ್ವೆ ವಲಯವನ್ನು ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಅವರು ಇಂದು ಇಲ್ಲಿ ವಿಧ್ಯುಕ್ತವಾಗಿ ಉದ್ಘಾಟಿಸಿದರು.

‘ಸುಂದರ– ಸಮೃದ್ಧ– ಸ್ವಾಭಿಮಾನ ಕರ್ನಾಟಕ ಕಟ್ಟಲು ಸಣ್ಣಪುಟ್ಟ ಭೇದಗಳನ್ನು ಮರೆತು ಒಂದಾಗಿ ದುಡಿಯೋಣ’ ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.

ಧಾರವಾಡ ಬಂದ್ ವಿಫಲ

ಧಾರವಾಡ, ನ. 1– ನೈರುತ್ಯ ರೈಲ್ವೆ ವಲಯ ಮತ್ತು ಹೈಕೋರ್ಟ್ ಪೀಠವನ್ನು ಹುಬ್ಬಳ್ಳಿ– ಧಾರವಾಡ ನಗರಗಳಲ್ಲಿ ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರ ತಾಳಿರುವ ಮಲತಾಯಿ ಧೋರಣೆಯನ್ನು ವಿರೋಧಿಸಿ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಯುವ ವೇದಿಕೆ ‘ಧಾರವಾಡ ನಗರ ಬಂದ್‌’ಗೆ ನೀಡಿದ್ದ ಕರೆಗೆ ಇಂದು ಜನರು ಪ್ರತಿಕ್ರಿಯೆ ನೀಡಲಿಲ್ಲ.

ಬಂದ್‌ಗೆ ಕರೆ ನೀಡಿ ನಿನ್ನೆ ಕರಪತ್ರಗಳ ಮೂಲಕ ಜನರ ಸಹಕಾರವನ್ನು ಪಡೆಯಲು ಪ್ರಯತ್ನಿಸಿದ್ದ ವೇದಿಕೆಯ ಮೂವರು ಮುಖಂಡರು ಮತ್ತು ಇತರ 15 ಜನರನ್ನು ಪೊಲೀಸರು ನಿನ್ನೆ ರಾತ್ರಿ 2 ಗಂಟೆ ವೇಳೆಗೆ ಬಂಧಿಸಿ ಅವರನ್ನು ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಇರಿಸಿದ್ದರಿಂದ ಬಂದ್ ಆರಂಭಿಸುವ ಪ್ರಯತ್ನಗಳನ್ನು ಯಾರೂ ಮಾಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT