ಧಾರವಾಡ, ನ. 1– ನೈರುತ್ಯ ರೈಲ್ವೆ ವಲಯ ಮತ್ತು ಹೈಕೋರ್ಟ್ ಪೀಠವನ್ನು ಹುಬ್ಬಳ್ಳಿ– ಧಾರವಾಡ ನಗರಗಳಲ್ಲಿ ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರ ತಾಳಿರುವ ಮಲತಾಯಿ ಧೋರಣೆಯನ್ನು ವಿರೋಧಿಸಿ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಯುವ ವೇದಿಕೆ ‘ಧಾರವಾಡ ನಗರ ಬಂದ್’ಗೆ ನೀಡಿದ್ದ ಕರೆಗೆ ಇಂದು ಜನರು ಪ್ರತಿಕ್ರಿಯೆ ನೀಡಲಿಲ್ಲ.