ಚಿತ್ರದುರ್ಗ, ಅ. 25– ಚಿತ್ರದುರ್ಗದ ಸಂತೆ ಹೊಂಡದಲ್ಲಿ ಪ್ರಯಾಣಿಕರ ಸಹಿತ ಮುಳುಗಿ ಹೋಗಿದ್ದ ಬಸ್ಸನ್ನು ಮೇಲಕ್ಕೆ ಎತ್ತಲಾಗಿದ್ದು ಈವರೆಗೆ 61 ಶವಗಳನ್ನು ಹೊರತೆಗೆಯಲಾಗಿದೆ. ಇನ್ನೂ ನೀರಿನಲ್ಲಿ ಉಳಿದಿರಬಹುದಾದ ಶವಗಳಿಗಾಗಿ ಶೋಧನೆ ಮುಂದುವ ರಿದಿದೆ. ಹೊರ ತೆಗೆದ ಶವಗಳನ್ನು ಅವರ ಕುಟುಂಬದವರು ಗುರುತಿಸಿದ್ದು ಅಂತಿಮ ಸಂಸ್ಕಾರಕ್ಕಾಗಿ ಅವರಿಗೆ ಒಪ್ಪಿಸಲಾಗಿದೆ.