ಮೃದು ಧೋರಣೆ ತಾಳಿದರೆ ವೀರಪ್ಪನ್ ಶರಣಾಗಬಹುದು – ಕೃಪಾಕರ, ಸೇನಾನಿ
ಬೆಂಗಳೂರು, ಅಕ್ಟೋಬರ್ 22– ಸರ್ಕಾರವು ದಂತಚೋರ ವೀರಪ್ಪನ್ ಶರಣಾಗತಿ ವಿಷಯದಲ್ಲಿ ಮೃದುಧೋರಣೆ ತೋರಿದರೆ ಆತ ಶರಣಾಗಬಹುದು ಎಂದು ವೀರಪ್ಪನ್ ಹಿಡಿತದಿಂದ ಸುರಕ್ಷಿತವಾಗಿ ಹಿಂತಿರುಗಿದ ಖ್ಯಾತ ಛಾಯಾಚಿತ್ರಗ್ರಾಹಕ ಕೃಪಾಕರ ಅಭಿಪ್ರಾಯಪಟ್ಟಿದ್ದಾರೆ.
‘ಇಳಿ ವಯಸ್ಸಿನಲ್ಲಿರುವ ವೀರಪ್ಪನ್ ತನ್ನ ಜೀವನದ ಸಂದಿಗ್ದ ಕಾಲದಲ್ಲಿದ್ದು, ಸರ್ಕಾರ ಜೀವರಕ್ಷಣೆ ಭರವಸೆ ನೀಡಿದರೆ ನಾಗರಿಕ ಜೀವನ ನಡೆಸಲು ಆಸಕ್ತಿ ತೋರಿದ್ದಾನೆ. ಮುಖ್ಯವಾಹಿನಿಗೆ ಬರಲು ಇಚ್ಛಿಸಿರುವ ಆತ, ಸರ್ಕಾರದಿಂದ ಬರುವ ಆಶಾದಾಯಕ ಉತ್ತರದ ನಿರೀಕ್ಷೆಯಲ್ಲಿದ್ದಾನೆ’ ಎಂದು ಅವರು ಇಲ್ಲಿ ನುಡಿದರು.