<p><strong>ರಾಷ್ಟ್ರೀಯ ರಂಗದಿಂದ ಸ್ಥಿರ ಸರ್ಕಾರ: ಬೊಮ್ಮಾಯಿ</strong></p>.<p><strong>ನವದೆಹಲಿ, ಅ. 5–</strong> ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ರಂಗ ಮತ್ತು ಎಡಪಕ್ಷಗಳ ಒಕ್ಕೂಟವು ಭಾರಿ ಬಹುಮತ ಪಡೆದು ಕೇಂದ್ರದಲ್ಲಿ ಸ್ಥಿರ ಸರ್ಕಾರ ರಚಿಸುವ ಪೂರ್ಣ ವಿಶ್ವಾಸ ತಮಗಿರುವುದಾಗಿ ಜನತಾ ದಳದ ಅಧ್ಯಕ್ಷ ಎಸ್.ಆರ್. ಬೊಮ್ಮಾಯಿ ಇಂದು ಇಲ್ಲಿ ಹೇಳಿದರು.</p>.<p>ಈ ಬಗೆಗೆ ಈಗಾಗಲೇ ಸಮಾನ ಮನಸ್ಕ ಪಕ್ಷಗಳ ಜತೆ ಹೊಂದಾಣಿಕೆಯ ಮಾತುಕತೆಗಳು ನಡೆಯುತ್ತಿದ್ದು ಸದ್ಯದಲ್ಲಿಯೇ ಈ ಸಂಬಂಧ ಒಂದು ಸ್ಪಷ್ಟ ಚಿತ್ರ ಮೂಡಿ ಬರಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p><strong>ವಾಣಿಜ್ಯ ತೆರಿಗೆ: 420 ಕೋಟಿ ಹೆಚ್ಚು ಸಂಗ್ರಹ</strong></p>.<p>ಬೆಂಗಳೂರು, ಅ. 5– ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಸಮಾಧಾನಕರವಾಗಿದ್ದು, ಕೇವಲ ವಾಣಿಜ್ಯ ತೆರಿಗೆ ಬಾಬ್ತಿನಲ್ಲೇ ಕಳೆದ ಸಾಲಿಗಿಂತ ಈ ವರ್ಷದ ಮೊದಲ ಐದು ತಿಂಗಳಲ್ಲಿ 420 ಕೋಟಿ ರೂಪಾಯಿ ಹೆಚ್ಚಿಗೆ ಸಂಗ್ರಹಿಸಲಾಗಿದೆ ಎಂದು ಹಣಕಾಸು ಸಚಿವ ಸಿದ್ದರಾಮಯ್ಯ ಇಂದು ಇಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಷ್ಟ್ರೀಯ ರಂಗದಿಂದ ಸ್ಥಿರ ಸರ್ಕಾರ: ಬೊಮ್ಮಾಯಿ</strong></p>.<p><strong>ನವದೆಹಲಿ, ಅ. 5–</strong> ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ರಂಗ ಮತ್ತು ಎಡಪಕ್ಷಗಳ ಒಕ್ಕೂಟವು ಭಾರಿ ಬಹುಮತ ಪಡೆದು ಕೇಂದ್ರದಲ್ಲಿ ಸ್ಥಿರ ಸರ್ಕಾರ ರಚಿಸುವ ಪೂರ್ಣ ವಿಶ್ವಾಸ ತಮಗಿರುವುದಾಗಿ ಜನತಾ ದಳದ ಅಧ್ಯಕ್ಷ ಎಸ್.ಆರ್. ಬೊಮ್ಮಾಯಿ ಇಂದು ಇಲ್ಲಿ ಹೇಳಿದರು.</p>.<p>ಈ ಬಗೆಗೆ ಈಗಾಗಲೇ ಸಮಾನ ಮನಸ್ಕ ಪಕ್ಷಗಳ ಜತೆ ಹೊಂದಾಣಿಕೆಯ ಮಾತುಕತೆಗಳು ನಡೆಯುತ್ತಿದ್ದು ಸದ್ಯದಲ್ಲಿಯೇ ಈ ಸಂಬಂಧ ಒಂದು ಸ್ಪಷ್ಟ ಚಿತ್ರ ಮೂಡಿ ಬರಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p><strong>ವಾಣಿಜ್ಯ ತೆರಿಗೆ: 420 ಕೋಟಿ ಹೆಚ್ಚು ಸಂಗ್ರಹ</strong></p>.<p>ಬೆಂಗಳೂರು, ಅ. 5– ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಸಮಾಧಾನಕರವಾಗಿದ್ದು, ಕೇವಲ ವಾಣಿಜ್ಯ ತೆರಿಗೆ ಬಾಬ್ತಿನಲ್ಲೇ ಕಳೆದ ಸಾಲಿಗಿಂತ ಈ ವರ್ಷದ ಮೊದಲ ಐದು ತಿಂಗಳಲ್ಲಿ 420 ಕೋಟಿ ರೂಪಾಯಿ ಹೆಚ್ಚಿಗೆ ಸಂಗ್ರಹಿಸಲಾಗಿದೆ ಎಂದು ಹಣಕಾಸು ಸಚಿವ ಸಿದ್ದರಾಮಯ್ಯ ಇಂದು ಇಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>