ಪಾಟ್ನಾ, ಮೇ 21(ಪಿಟಿಐ)– ಸಿಬಿಐನಿಂದ ಕೆಲವು ಸ್ಪಷ್ಟೀಕರಣಗಳು ಬರಬೇಕಾಗಿದ್ದು, ಅವು ಬಂದ ಬಳಿಕ ಮೇವು ಹಗರಣದಲ್ಲಿ ಮುಖ್ಯಮಂತ್ರಿ ಲಾಲೂ ಯಾದವ್ ಅವರ ವಿರುದ್ಧ ತನಿಖೆಗೆ ಅನುಮತಿ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಬಿಹಾರದ ರಾಜ್ಯಪಾಲರಾದ ಡಾ. ಎ.ಆರ್. ಕಿದ್ವಾಯಿ ಅವರು ಇಂದು ಇಲ್ಲಿ ಹೇಳಿದ್ದಾರೆ.
ಕೆಲವು ಪ್ರಮುಖ ಅಂಶಗಳ ಬಗ್ಗೆ ಸಿಬಿಐನಿಂದ ಸ್ಪಷ್ಟೀಕರಣ ಕೇಳಿದ್ದೇನೆ. ಆ ಸ್ಪಷ್ಟೀಕರಣಗಳು ನನ್ನ ಕೈ ಸೇರಿದ ಬಳಿಕವಷ್ಟೇ ನಿರ್ಧಾರ ಕೈಗೊಳ್ಳಲು ನಾನು ಸಮರ್ಥನಾಗುತ್ತೇನೆ’ ಎಂದು ರಾಜ್ಯಪಾಲರು ತಿಳಿಸಿದ್ದಾರೆ.