<p><strong>ಕಾವೇರಿ: ಬಲವಂತವಾದರೆ ಉಭಯ ರಾಜ್ಯಗಳ ಮಧುರ ಬಾಂಧವ್ಯಕ್ಕೆ ಧಕ್ಕೆ</strong></p>.<p><strong>ಬೆಂಗಳೂರು, ಜುಲೈ 15– </strong>ಮೈಸೂರು ರಾಜ್ಯದಲ್ಲಿ ಮಧ್ಯಕಾಲದ ಸರ್ಕಾರ ಆಡಳಿತದಲ್ಲಿರುವಾಗ, ಕಾವೇರಿ ವಿವಾದದ ಬಗ್ಗೆ ಬಲವಂತದಿಂದ ತೀರ್ಮಾನಕ್ಕೆ ಬರಲು ತಮಿಳುನಾಡು ಸರ್ಕಾರ ಪ್ರಯತ್ನಿಸುವುದು ನ್ಯಾಯವಾದುದಲ್ಲವೆಂದೂ, ಇದರಿಂದ ಎರಡು ರಾಜ್ಯಗಳ ನಡುವೆ ಇರುವ ಮಧುರ ಬಾಂಧವ್ಯಕ್ಕೆ ಧಕ್ಕೆ ಉಂಟಾಗುವುದೆಂದೂ ರಾಜ್ಯದ ಆಡಳಿತ ಕಾಂಗ್ರೆಸ್ಸಿನ ಸಮಾಜವಾದಿ ಕಾರ್ಯಾಚರಣೆ ವೇದಿಕೆ ತಿಳಿಸಿದೆ.</p>.<p><strong>ಆವೇಶಪೂರಿತ: </strong>ಕಾವೇರಿ ವಿವಾದದ ಬಗ್ಗೆ ತಮಿಳುನಾಡು ವಿಧಾನಮಂಡಲ ಅಂಗೀಕರಿಸಿರುವ ನಿರ್ಣಯ ಆವೇಶದಿಂದ ಕೂಡಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ನದಿನೀರಿನ ಹಕ್ಕುಗಳನ್ನು ಕರಾರುವಕ್ಕಾದ ಅಂಕಿ ಅಂಶಗಳ ಆಧಾರದ ಮೇಲೆ ಮಾತ್ರ ಚರ್ಚಿಸಲು ಸಾಧ್ಯವೆಂದೂ ಅಂಕಿ ಅಂಶಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೆ ಅವನ್ನು ನಿಷ್ಪಕ್ಷತವಾದ ಸಮಿತಿ ಪರಿಶೀಲಿಸಿ ತೀರ್ಮಾನಿಸ<br />ಬೇಕಾಗಿದೆ ಎಂದು ಸಮಿತಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾವೇರಿ: ಬಲವಂತವಾದರೆ ಉಭಯ ರಾಜ್ಯಗಳ ಮಧುರ ಬಾಂಧವ್ಯಕ್ಕೆ ಧಕ್ಕೆ</strong></p>.<p><strong>ಬೆಂಗಳೂರು, ಜುಲೈ 15– </strong>ಮೈಸೂರು ರಾಜ್ಯದಲ್ಲಿ ಮಧ್ಯಕಾಲದ ಸರ್ಕಾರ ಆಡಳಿತದಲ್ಲಿರುವಾಗ, ಕಾವೇರಿ ವಿವಾದದ ಬಗ್ಗೆ ಬಲವಂತದಿಂದ ತೀರ್ಮಾನಕ್ಕೆ ಬರಲು ತಮಿಳುನಾಡು ಸರ್ಕಾರ ಪ್ರಯತ್ನಿಸುವುದು ನ್ಯಾಯವಾದುದಲ್ಲವೆಂದೂ, ಇದರಿಂದ ಎರಡು ರಾಜ್ಯಗಳ ನಡುವೆ ಇರುವ ಮಧುರ ಬಾಂಧವ್ಯಕ್ಕೆ ಧಕ್ಕೆ ಉಂಟಾಗುವುದೆಂದೂ ರಾಜ್ಯದ ಆಡಳಿತ ಕಾಂಗ್ರೆಸ್ಸಿನ ಸಮಾಜವಾದಿ ಕಾರ್ಯಾಚರಣೆ ವೇದಿಕೆ ತಿಳಿಸಿದೆ.</p>.<p><strong>ಆವೇಶಪೂರಿತ: </strong>ಕಾವೇರಿ ವಿವಾದದ ಬಗ್ಗೆ ತಮಿಳುನಾಡು ವಿಧಾನಮಂಡಲ ಅಂಗೀಕರಿಸಿರುವ ನಿರ್ಣಯ ಆವೇಶದಿಂದ ಕೂಡಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ನದಿನೀರಿನ ಹಕ್ಕುಗಳನ್ನು ಕರಾರುವಕ್ಕಾದ ಅಂಕಿ ಅಂಶಗಳ ಆಧಾರದ ಮೇಲೆ ಮಾತ್ರ ಚರ್ಚಿಸಲು ಸಾಧ್ಯವೆಂದೂ ಅಂಕಿ ಅಂಶಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೆ ಅವನ್ನು ನಿಷ್ಪಕ್ಷತವಾದ ಸಮಿತಿ ಪರಿಶೀಲಿಸಿ ತೀರ್ಮಾನಿಸ<br />ಬೇಕಾಗಿದೆ ಎಂದು ಸಮಿತಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>