ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಶುಕ್ರವಾರ, 16–7–1971

ಕಾವೇರಿ: ಬಲವಂತವಾದರೆ ಉಭಯ ರಾಜ್ಯಗಳ ಮಧುರ ಬಾಂಧವ್ಯಕ್ಕೆ ಧಕ್ಕೆ
ಬೆಂಗಳೂರು, ಜುಲೈ 15– ಮೈಸೂರು ರಾಜ್ಯದಲ್ಲಿ ಮಧ್ಯಕಾಲದ ಸರ್ಕಾರ ಆಡಳಿತದಲ್ಲಿರುವಾಗ, ಕಾವೇರಿ ವಿವಾದದ ಬಗ್ಗೆ ಬಲವಂತದಿಂದ ತೀರ್ಮಾನಕ್ಕೆ ಬರಲು ತಮಿಳುನಾಡು ಸರ್ಕಾರ ಪ್ರಯತ್ನಿಸುವುದು ನ್ಯಾಯವಾದುದಲ್ಲವೆಂದೂ, ಇದರಿಂದ ಎರಡು ರಾಜ್ಯಗಳ ನಡುವೆ ಇರುವ ಮಧುರ ಬಾಂಧವ್ಯಕ್ಕೆ ಧಕ್ಕೆ ಉಂಟಾಗುವುದೆಂದೂ ರಾಜ್ಯದ ಆಡಳಿತ ಕಾಂಗ್ರೆಸ್ಸಿನ ಸಮಾಜವಾದಿ ಕಾರ್ಯಾಚರಣೆ ವೇದಿಕೆ ತಿಳಿಸಿದೆ.
ಆವೇಶಪೂರಿತ: ಕಾವೇರಿ ವಿವಾದದ ಬಗ್ಗೆ ತಮಿಳುನಾಡು ವಿಧಾನಮಂಡಲ ಅಂಗೀಕರಿಸಿರುವ ನಿರ್ಣಯ ಆವೇಶದಿಂದ ಕೂಡಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ನದಿನೀರಿನ ಹಕ್ಕುಗಳನ್ನು ಕರಾರುವಕ್ಕಾದ ಅಂಕಿ ಅಂಶಗಳ ಆಧಾರದ ಮೇಲೆ ಮಾತ್ರ ಚರ್ಚಿಸಲು ಸಾಧ್ಯವೆಂದೂ ಅಂಕಿ ಅಂಶಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೆ ಅವನ್ನು ನಿಷ್ಪಕ್ಷತವಾದ ಸಮಿತಿ ಪರಿಶೀಲಿಸಿ ತೀರ್ಮಾನಿಸ
ಬೇಕಾಗಿದೆ ಎಂದು ಸಮಿತಿ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.