ಬೆಂಗಳೂರು, ಜುಲೈ 15– ಮೈಸೂರು ರಾಜ್ಯದಲ್ಲಿ ಮಧ್ಯಕಾಲದ ಸರ್ಕಾರ ಆಡಳಿತದಲ್ಲಿರುವಾಗ, ಕಾವೇರಿ ವಿವಾದದ ಬಗ್ಗೆ ಬಲವಂತದಿಂದ ತೀರ್ಮಾನಕ್ಕೆ ಬರಲು ತಮಿಳುನಾಡು ಸರ್ಕಾರ ಪ್ರಯತ್ನಿಸುವುದು ನ್ಯಾಯವಾದುದಲ್ಲವೆಂದೂ, ಇದರಿಂದ ಎರಡು ರಾಜ್ಯಗಳ ನಡುವೆ ಇರುವ ಮಧುರ ಬಾಂಧವ್ಯಕ್ಕೆ ಧಕ್ಕೆ ಉಂಟಾಗುವುದೆಂದೂ ರಾಜ್ಯದ ಆಡಳಿತ ಕಾಂಗ್ರೆಸ್ಸಿನ ಸಮಾಜವಾದಿ ಕಾರ್ಯಾಚರಣೆ ವೇದಿಕೆ ತಿಳಿಸಿದೆ.