ವಿಶಾಲ ಗೋಮಾಂಯತಕ ರಾಜ್ಯ ನಿರ್ಮಾಣವಾಗಬೇಕೇಂದು ಶ್ರೀ ಆರ್.ಡಿ. ಕಿತ್ತೂರ್ ಹೇಳಿದರೆಂಬ ವರದಿಗಳ ಬಗ್ಗೆ ಶ್ರೀ ಕಾಗೋಡು ತಿಮ್ಮಪ್ಪನವರು ಗಮನ ಸೆಳೆಯುವ ಸೂಚನೆ ಮಂಡಿಸಿದಾಗ ಉತ್ತರ ನೀಡಿದ ಸಚಿವರು, ‘ಶ್ರೀ ಕಿತ್ತೂರ್ ಅವರೇ ಅದನ್ನು ನಿರಾಕರಿಸಿದ್ದಾರೆ. ಮರಾಠಿ ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ಆಧಾರವಾಗಿಟ್ಟು ಅವರ ಮೇಲೆ ಆರೋಪ ಮಾಡಲಾಗಿತ್ತು. ಅವರೇ ಅಲ್ಲಗಳೆದಿರುವುದರಿಂದ ಏನನ್ನೂ ಹೇಳಲಾರೆ’ ಎಂದರು.