ಈ ನೀತಿಯನ್ನನುಸರಿಸಿ ರಾಜ್ಯದಲ್ಲಿ ಶ್ರೀ ವೀರೇಂದ್ರ ಪಾಟೀಲರ ಸರ್ಕಾರವನ್ನು ಪದಚ್ಯುತಗೊಳಿಸುವ ಯಾರ ಪ್ರಯತ್ನಕ್ಕೇ ಆಗಲಿ ತಮ್ಮ ಪಕ್ಷದ ಬೆಂಬಲವಿದೆ ಎಂದರು. ವಿಧಾನಸಭೆಯಲ್ಲಿ ಇತರ ಕಾಂಗ್ರೆಸ್ ವಿರೋಧಿ ಪಕ್ಷಗಳೊಡನೆ ತಮ್ಮ ಪಕ್ಷ ಸಹಕರಿಸುವುದು, ಆ ಪಕ್ಷಗಳ ಹೊಂದಾಣಿಕೆ ಸಾಧ್ಯತೆಗಳನ್ನು ಅವಲಂಬಿಸಿದೆಯೆಂದು ವರದಿಗಾರರಿಗೆ ತಿಳಿಸಿದರು.