<p><strong>ರಾಷ್ಟ್ರಗೌರವದೊಡನೆ ರಾಧಾಕೃಷ್ಣನ್ ಅಂತ್ಯಕ್ರಿಯೆ</strong></p>.<p>ಮದರಾಸ್, ಏ. 17– ಬುಧವಾರ ಮಧ್ಯರಾತ್ರಿ ಇಲ್ಲಿ ನಿಧನರಾದ ಮಾಜಿ ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಅವರ ಅಂತ್ಯಕ್ರಿಯೆ ಇಂದು ಸಂಜೆ ಮೈಲಾಪುರ ರುದ್ರಭೂಮಿಯಲ್ಲಿ ಪೂರ್ಣ ಸರ್ಕಾರಿ ಗೌರವದೊಡನೆ ನಡೆಯಿತು.</p>.<p>ರಾಧಾಕೃಷ್ಣನ್ ಅವರ ಪುತ್ರ ಎಸ್. ಗೋಪಾಲ್ ಅವರು ಚಿತೆಗೆ ಸಂಜೆ 5.10ರಲ್ಲಿ ಅಗ್ನಿಸ್ಪರ್ಶ ಮಾಡಿದರು.</p>.<p>ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಮತ್ತು ಪ್ರಧಾನಿ ಇಂದಿರಾ ಗಾಂಧಿ ಪರವಾಗಿ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಲಾಯಿತು. ಕೇಂದ್ರ ಸರ್ಕಾರದ ಪರವಾಗಿ, ಸಚಿವರಾದ ಸಿ. ಸುಬ್ರಹ್ಮಣ್ಯಂ, ಉಮಾಶಂಕರ ದೀಕ್ಷಿತ್ ಪಾಲ್ಗೊಂಡಿದ್ದರು.</p>.<p><strong>1975–76ರಲ್ಲಿ ಭಾರತದ ಸಾಲ ಬಾಕಿ ಏರಿಕೆ</strong></p>.<p>ನವದೆಹಲಿ, ಏ. 17– ಭಾರತದ ಸಾಲ ಮರುಪಾವತಿ ಬಾಕಿ 1975–76ನೇ ಸಾಲಿನಲ್ಲಿ 1975ರ ಮಾರ್ಚ್ 31ರಂದು ಇದ್ದುದಕ್ಕಿಂತ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ ಎಂದು ವಿಶ್ವಬ್ಯಾಂಕ್ ಅಂದಾಜು ಮಾಡಿದೆ.</p>.<p>ಅಲ್ಲದೆ, ಭಾರತಕ್ಕೆ 150 ಕೋಟಿ ಡಾಲರಿಗೆ ಕಡಿಮೆ ಇಲ್ಲದಂತೆ ಹೊಸ ಸಾಲ ನೀಡುವ ಒಪ್ಪಂದ ಮಾಡಿಕೊಳ್ಳಲು ನೆರವು ನೀಡುವ ರಾಷ್ಟ್ರಗಳಿಗೆ ಶಿಫಾರಸು ಮಾಡಲಿದೆ. <br />ಭಾರತಕ್ಕೆ ನೆರವು ನೀಡುವ ರಾಷ್ಟ್ರಗಳು ಜೂನ್ 25 ಮತ್ತು 26ರಂದು ಪ್ಯಾರಿಸ್ನಲ್ಲಿ ಸಭೆ ಸೇರಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಷ್ಟ್ರಗೌರವದೊಡನೆ ರಾಧಾಕೃಷ್ಣನ್ ಅಂತ್ಯಕ್ರಿಯೆ</strong></p>.<p>ಮದರಾಸ್, ಏ. 17– ಬುಧವಾರ ಮಧ್ಯರಾತ್ರಿ ಇಲ್ಲಿ ನಿಧನರಾದ ಮಾಜಿ ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಅವರ ಅಂತ್ಯಕ್ರಿಯೆ ಇಂದು ಸಂಜೆ ಮೈಲಾಪುರ ರುದ್ರಭೂಮಿಯಲ್ಲಿ ಪೂರ್ಣ ಸರ್ಕಾರಿ ಗೌರವದೊಡನೆ ನಡೆಯಿತು.</p>.<p>ರಾಧಾಕೃಷ್ಣನ್ ಅವರ ಪುತ್ರ ಎಸ್. ಗೋಪಾಲ್ ಅವರು ಚಿತೆಗೆ ಸಂಜೆ 5.10ರಲ್ಲಿ ಅಗ್ನಿಸ್ಪರ್ಶ ಮಾಡಿದರು.</p>.<p>ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಮತ್ತು ಪ್ರಧಾನಿ ಇಂದಿರಾ ಗಾಂಧಿ ಪರವಾಗಿ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಲಾಯಿತು. ಕೇಂದ್ರ ಸರ್ಕಾರದ ಪರವಾಗಿ, ಸಚಿವರಾದ ಸಿ. ಸುಬ್ರಹ್ಮಣ್ಯಂ, ಉಮಾಶಂಕರ ದೀಕ್ಷಿತ್ ಪಾಲ್ಗೊಂಡಿದ್ದರು.</p>.<p><strong>1975–76ರಲ್ಲಿ ಭಾರತದ ಸಾಲ ಬಾಕಿ ಏರಿಕೆ</strong></p>.<p>ನವದೆಹಲಿ, ಏ. 17– ಭಾರತದ ಸಾಲ ಮರುಪಾವತಿ ಬಾಕಿ 1975–76ನೇ ಸಾಲಿನಲ್ಲಿ 1975ರ ಮಾರ್ಚ್ 31ರಂದು ಇದ್ದುದಕ್ಕಿಂತ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ ಎಂದು ವಿಶ್ವಬ್ಯಾಂಕ್ ಅಂದಾಜು ಮಾಡಿದೆ.</p>.<p>ಅಲ್ಲದೆ, ಭಾರತಕ್ಕೆ 150 ಕೋಟಿ ಡಾಲರಿಗೆ ಕಡಿಮೆ ಇಲ್ಲದಂತೆ ಹೊಸ ಸಾಲ ನೀಡುವ ಒಪ್ಪಂದ ಮಾಡಿಕೊಳ್ಳಲು ನೆರವು ನೀಡುವ ರಾಷ್ಟ್ರಗಳಿಗೆ ಶಿಫಾರಸು ಮಾಡಲಿದೆ. <br />ಭಾರತಕ್ಕೆ ನೆರವು ನೀಡುವ ರಾಷ್ಟ್ರಗಳು ಜೂನ್ 25 ಮತ್ತು 26ರಂದು ಪ್ಯಾರಿಸ್ನಲ್ಲಿ ಸಭೆ ಸೇರಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>