ಬೆಂಗಳೂರು, ಮೇ 14– ರಾಜ್ಯದ ಪೊಲೀಸ್ ಮಹಾನಿರ್ದೇಶಕ ಹಾಗೂ ಮಹಾನಿರೀಕ್ಷಕ ಹುದ್ದೆಗೆ ಟಿ.ಶ್ರೀನಿವಾಸುಲು ಅವರನ್ನು ಸರ್ಕಾರ ನೇಮಕ ಮಾಡಿರುವುದನ್ನು ರದ್ದುಗೊಳಿಸಿ, ಹಿರಿಯ ಅಧಿಕಾರಿ ಸಿ.ದಿನಕರ್ ಸೇರಿದಂತೆ ಅರ್ಹರ ಹೆಸರು ಪರಿಶೀಲಿಸಿ ನೇಮಕ ಮಾಡಬೇಕೆಂದು ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ಎತ್ತಿಹಿಡಿದಿದೆ.