<p>ಬೆಂಗಳೂರು, ಆಗಸ್ಟ್ 7– ‘ವರನಟ ಡಾ. ರಾಜ್ ಮತ್ತು ಇತರ ಮೂವರ ಅಪಹರಣ ಪ್ರಕರಣಕ್ಕೆ ಮುಕ್ತಾಯ ಹೇಳಲು ರಾಜ್ಯ ಸರ್ಕಾರ ಹಲವು ನಿರ್ಧಾರಗಳನ್ನು ಪ್ರಕಟಿಸಿದರೂ ಅದಕ್ಕೆ ಪ್ರತಿಯಾಗಿ ವೀರಪ್ಪನ್ನ ಮೌನ ಅಸಹನೀಯವಾಗಿದೆ’ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಂದು ಇಲ್ಲಿ ಬೇಸರ ವ್ಯಕ್ತಪಡಿಸಿದರು.</p><p>ವರದಿಗಾರರ ಜೊತೆಗೆ ಮಾತನಾಡಿದ ಅವರು, ವೀರಪ್ಪನ್ ಕಡೆಯಿಂದ ಇದುವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದರು.</p><p>ಕಾರು–ಬಸ್ ಡಿಕ್ಕಿ: ಪಟೇಲ್ ಬಂಧುಗಳು ಸೇರಿ 4 ಸಾವು</p><p>ಚಿತ್ರದುರ್ಗ, ಆಗಸ್ಟ್ 7– ಗೌರಮ್ಮನ ಗೇಟ್ ಬಳಿ ಹೆದ್ದಾರಿಯಲ್ಲಿ ಕಾರು ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನ ಚಾಲಕ ಮತ್ತು ಕಾರಿನಲ್ಲಿದ್ದ ಇತರ ಮೂವರು ಮೃತರಾದರು.</p><p>ಮೃತರಾದ ಸಾವಿತ್ರಮ್ಮ ವಾಮದೇವಪ್ಪ (58) ಹಾಗೂ ಉಮಾ ಬಸವರಾಜ್ (56) ರಾಜ್ಯದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ತಂಗಿಯರು; ಮೃತಳಾದ ಬಾಲಕಿ ಶಕ್ತಿ, ಜೆ.ಎಚ್. ಪಟೇಲರ ಮಗ ಮಹಿಮಾ ಪಟೇಲ್ ಅವರ ಮಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು, ಆಗಸ್ಟ್ 7– ‘ವರನಟ ಡಾ. ರಾಜ್ ಮತ್ತು ಇತರ ಮೂವರ ಅಪಹರಣ ಪ್ರಕರಣಕ್ಕೆ ಮುಕ್ತಾಯ ಹೇಳಲು ರಾಜ್ಯ ಸರ್ಕಾರ ಹಲವು ನಿರ್ಧಾರಗಳನ್ನು ಪ್ರಕಟಿಸಿದರೂ ಅದಕ್ಕೆ ಪ್ರತಿಯಾಗಿ ವೀರಪ್ಪನ್ನ ಮೌನ ಅಸಹನೀಯವಾಗಿದೆ’ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಂದು ಇಲ್ಲಿ ಬೇಸರ ವ್ಯಕ್ತಪಡಿಸಿದರು.</p><p>ವರದಿಗಾರರ ಜೊತೆಗೆ ಮಾತನಾಡಿದ ಅವರು, ವೀರಪ್ಪನ್ ಕಡೆಯಿಂದ ಇದುವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದರು.</p><p>ಕಾರು–ಬಸ್ ಡಿಕ್ಕಿ: ಪಟೇಲ್ ಬಂಧುಗಳು ಸೇರಿ 4 ಸಾವು</p><p>ಚಿತ್ರದುರ್ಗ, ಆಗಸ್ಟ್ 7– ಗೌರಮ್ಮನ ಗೇಟ್ ಬಳಿ ಹೆದ್ದಾರಿಯಲ್ಲಿ ಕಾರು ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನ ಚಾಲಕ ಮತ್ತು ಕಾರಿನಲ್ಲಿದ್ದ ಇತರ ಮೂವರು ಮೃತರಾದರು.</p><p>ಮೃತರಾದ ಸಾವಿತ್ರಮ್ಮ ವಾಮದೇವಪ್ಪ (58) ಹಾಗೂ ಉಮಾ ಬಸವರಾಜ್ (56) ರಾಜ್ಯದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ತಂಗಿಯರು; ಮೃತಳಾದ ಬಾಲಕಿ ಶಕ್ತಿ, ಜೆ.ಎಚ್. ಪಟೇಲರ ಮಗ ಮಹಿಮಾ ಪಟೇಲ್ ಅವರ ಮಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>