<p><strong>‘ಕುವೆಂಪು’ಗೆ ಜ್ಞಾನಪೀಠದ ಪ್ರಶಸ್ತಿ</strong><br /> ನವದೆಹಲಿ, ಮೇ 16– ಸುಪ್ರಸಿದ್ಧ ಕನ್ನಡ ಕವಿ ಶ್ರೀ ಕೆ.ವಿ. ಪುಟ್ಟಪ್ಪ ಮತ್ತು ಗುಜರಾತಿ ಕವಿ ಶ್ರೀ ಉಮಾಶಂಕರ ಜೋಶಿ ಅವರು ಭಾರತೀಯ ಜ್ಞಾನಪೀಠದ ಪ್ರಶಸ್ತಿಯನ್ನು ಪಡೆದಿದ್ದಾರೆ.</p>.<p>1967ನೇ ವರ್ಷಕ್ಕಾಗಿ ನೀಡಲಾದ ಭಾರತದ ಈ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಈ ಕವಿಗಳಿಬ್ಬರಿಗೂ ಹಂಚಲಾಗುತ್ತದೆ.</p>.<p>*</p>.<p><strong>ಹರಿಯಾಣ: ನಿರಾತಂಕ ಬಹುಮತ ಪಡೆದ ಕಾಂಗ್ರೆಸ್ ಅಧಿಕಾರಕ್ಕೆ</strong></p>.<p>ಚಂಡೀಗಢ, ಮೇ 16– ಹರಿಯಾಣ ವಿಧಾನಸಭೆಯ 80 ಸ್ಥಾನಗಳಿಗೆ ನಡೆದ ಮಧ್ಯಕಾಲೀನ ಚುನಾವಣೆಗಳಲ್ಲಿ 48 ಸ್ಥಾನಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡು ನಿರಾಂತಕ ಬಹುಮತದಿಂದ ಮತ್ತೆ ಅಧಿಕಾರದ ಗದ್ದುಗೆ ಏರಿದೆ.</p>.<p>*<br /> <strong>ಸಭಾಸದನಕ್ಕೆ ಸಪ್ತ ಸ್ತ್ರೀಯರು</strong></p>.<p>ಚಂಡೀಗಢ, ಮೇ 16– ಹರಿಯಾಣ ವಿಧಾನಸಭೆಗೆ ಮಧ್ಯಕಾಲೀನ ಚುನಾವಣೆಗಳ ಮೂಲಕ ಏಳು ಮಂದಿ ಮಹಿಳೆಯರು ಪ್ರವೇಶಿಸಿದ್ದಾರೆ.</p>.<p>ಈ ಏಳು ಮಹಿಳೆಯರಲ್ಲಿ ಐವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. ಒಬ್ಬರು ವಿಶಾಲ ಹರಿಯಾಣ ಪಕ್ಷಕ್ಕೆ ಸೇರಿದವರು. ಮತ್ತೊಬ್ಬರು ಪಕ್ಷೇತರರು.</p>.<p>ಚುನಾವಣಾ ಕಣಕ್ಕೆ ಇಳಿದಿದ್ದ ಮುನ್ನೂರ ತೊಂಬತ್ತೊಂಬತ್ತು ಸ್ಪರ್ಧಿಗಳಲ್ಲಿ ಮಹಿಳಾ ಸ್ಪರ್ಧಿಗಳು ಹನ್ನೆರಡು ಜನ. ಏಳುಮಂದಿ ಕಾಂಗ್ರೆಸಿನವರು. ವಿಶಾಲ ಹರಿಯಾಣ ಪಕ್ಷ ಮತ್ತು ಜನಸಂಘಗಳಿಂದ ತಲಾ ಒಬ್ಬರು. ಮೂವರು ಪಕ್ಷೇತರರು.</p>.<p><strong>ಪಕ್ಷಾಂತರ ರಾಜಕೀಯಕ್ಕೆ ನಿರಾಕರಣೆ ಮುದ್ರೆ– ಇಂದಿರಾ</strong></p>.<p>ನವದೆಹಲಿ, ಮೇ 16– ಹರಿಯಾಣ ಚುನಾವಣಾ ಫಲಿತಾಂಶ ’ಪಕ್ಷಾಂತರ ರಾಜಕೀಯಕ್ಕೆ ನಿರಾಕರಣೆಯ ಮುದ್ರೆಯೊತ್ತಿದೆ’. ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅಭಿಪ್ರಾಯವಿದು.</p>.<p>ಹರಿಯಾಣದ ಮಧ್ಯಕಾಲೀನ ಚುನಾವಣೆಗಳನ್ನು ವ್ಯವಸ್ಥಿತ ಹಾಗೂ ಸುಗಮ ರೀತಿಯಲ್ಲಿ ನಿರ್ವಹಿಸಿದ್ದಕ್ಕೆ ಜನತೆಯನ್ನು ಅಭಿನಂದಿಸಿ ಅವರು ಇಂದು ಪತ್ರಿಕಾ ಹೇಳಿಕೆಯೊಂದನ್ನಿತ್ತರು.</p>.<p><strong>ರಾಜ್ಯ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಕೋಮುವಾರು ಪ್ರಶ್ನೆ ಚರ್ಚೆ</strong></p>.<p>ನವದೆಹಲಿ, ಮೇ 16– ಕೇಂದ್ರ ಗೃಹ ಸಚಿವ ಶ್ರೀ ವೈ.ಬಿ. ಚವಾಣ್ ಅವರು ಮೇ 19 ರಂದು ಇಲ್ಲಿ ಕರೆದಿರುವ ರಾಜ್ಯ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಕೋಮುವಾರು ಸಮಸ್ಯೆ ಮುಖ್ಯವಾಗಿ ಚರ್ಚಿಸಲ್ಪಡುವುದೆಂದು ತಿಳಿದು ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ಕುವೆಂಪು’ಗೆ ಜ್ಞಾನಪೀಠದ ಪ್ರಶಸ್ತಿ</strong><br /> ನವದೆಹಲಿ, ಮೇ 16– ಸುಪ್ರಸಿದ್ಧ ಕನ್ನಡ ಕವಿ ಶ್ರೀ ಕೆ.ವಿ. ಪುಟ್ಟಪ್ಪ ಮತ್ತು ಗುಜರಾತಿ ಕವಿ ಶ್ರೀ ಉಮಾಶಂಕರ ಜೋಶಿ ಅವರು ಭಾರತೀಯ ಜ್ಞಾನಪೀಠದ ಪ್ರಶಸ್ತಿಯನ್ನು ಪಡೆದಿದ್ದಾರೆ.</p>.<p>1967ನೇ ವರ್ಷಕ್ಕಾಗಿ ನೀಡಲಾದ ಭಾರತದ ಈ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಈ ಕವಿಗಳಿಬ್ಬರಿಗೂ ಹಂಚಲಾಗುತ್ತದೆ.</p>.<p>*</p>.<p><strong>ಹರಿಯಾಣ: ನಿರಾತಂಕ ಬಹುಮತ ಪಡೆದ ಕಾಂಗ್ರೆಸ್ ಅಧಿಕಾರಕ್ಕೆ</strong></p>.<p>ಚಂಡೀಗಢ, ಮೇ 16– ಹರಿಯಾಣ ವಿಧಾನಸಭೆಯ 80 ಸ್ಥಾನಗಳಿಗೆ ನಡೆದ ಮಧ್ಯಕಾಲೀನ ಚುನಾವಣೆಗಳಲ್ಲಿ 48 ಸ್ಥಾನಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡು ನಿರಾಂತಕ ಬಹುಮತದಿಂದ ಮತ್ತೆ ಅಧಿಕಾರದ ಗದ್ದುಗೆ ಏರಿದೆ.</p>.<p>*<br /> <strong>ಸಭಾಸದನಕ್ಕೆ ಸಪ್ತ ಸ್ತ್ರೀಯರು</strong></p>.<p>ಚಂಡೀಗಢ, ಮೇ 16– ಹರಿಯಾಣ ವಿಧಾನಸಭೆಗೆ ಮಧ್ಯಕಾಲೀನ ಚುನಾವಣೆಗಳ ಮೂಲಕ ಏಳು ಮಂದಿ ಮಹಿಳೆಯರು ಪ್ರವೇಶಿಸಿದ್ದಾರೆ.</p>.<p>ಈ ಏಳು ಮಹಿಳೆಯರಲ್ಲಿ ಐವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. ಒಬ್ಬರು ವಿಶಾಲ ಹರಿಯಾಣ ಪಕ್ಷಕ್ಕೆ ಸೇರಿದವರು. ಮತ್ತೊಬ್ಬರು ಪಕ್ಷೇತರರು.</p>.<p>ಚುನಾವಣಾ ಕಣಕ್ಕೆ ಇಳಿದಿದ್ದ ಮುನ್ನೂರ ತೊಂಬತ್ತೊಂಬತ್ತು ಸ್ಪರ್ಧಿಗಳಲ್ಲಿ ಮಹಿಳಾ ಸ್ಪರ್ಧಿಗಳು ಹನ್ನೆರಡು ಜನ. ಏಳುಮಂದಿ ಕಾಂಗ್ರೆಸಿನವರು. ವಿಶಾಲ ಹರಿಯಾಣ ಪಕ್ಷ ಮತ್ತು ಜನಸಂಘಗಳಿಂದ ತಲಾ ಒಬ್ಬರು. ಮೂವರು ಪಕ್ಷೇತರರು.</p>.<p><strong>ಪಕ್ಷಾಂತರ ರಾಜಕೀಯಕ್ಕೆ ನಿರಾಕರಣೆ ಮುದ್ರೆ– ಇಂದಿರಾ</strong></p>.<p>ನವದೆಹಲಿ, ಮೇ 16– ಹರಿಯಾಣ ಚುನಾವಣಾ ಫಲಿತಾಂಶ ’ಪಕ್ಷಾಂತರ ರಾಜಕೀಯಕ್ಕೆ ನಿರಾಕರಣೆಯ ಮುದ್ರೆಯೊತ್ತಿದೆ’. ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅಭಿಪ್ರಾಯವಿದು.</p>.<p>ಹರಿಯಾಣದ ಮಧ್ಯಕಾಲೀನ ಚುನಾವಣೆಗಳನ್ನು ವ್ಯವಸ್ಥಿತ ಹಾಗೂ ಸುಗಮ ರೀತಿಯಲ್ಲಿ ನಿರ್ವಹಿಸಿದ್ದಕ್ಕೆ ಜನತೆಯನ್ನು ಅಭಿನಂದಿಸಿ ಅವರು ಇಂದು ಪತ್ರಿಕಾ ಹೇಳಿಕೆಯೊಂದನ್ನಿತ್ತರು.</p>.<p><strong>ರಾಜ್ಯ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಕೋಮುವಾರು ಪ್ರಶ್ನೆ ಚರ್ಚೆ</strong></p>.<p>ನವದೆಹಲಿ, ಮೇ 16– ಕೇಂದ್ರ ಗೃಹ ಸಚಿವ ಶ್ರೀ ವೈ.ಬಿ. ಚವಾಣ್ ಅವರು ಮೇ 19 ರಂದು ಇಲ್ಲಿ ಕರೆದಿರುವ ರಾಜ್ಯ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಕೋಮುವಾರು ಸಮಸ್ಯೆ ಮುಖ್ಯವಾಗಿ ಚರ್ಚಿಸಲ್ಪಡುವುದೆಂದು ತಿಳಿದು ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>