<p><strong>ಅಂತರಿಕ್ಷದಲ್ಲಿ ಮಹಿಳೆ: ರಷ್ಯದ ಹೊಸ ಪ್ರಯೋಗ</strong><br /> ಮಾಸ್ಕೊ, ಜೂನ್ 16- ವಿಶ್ವದ ಪ್ರಪ್ರಥಮ ಮಹಿಳಾ ಗಗನಯಾತ್ರಿಯನ್ನು ರಷ್ಯ ಇಂದು ಅಂತರಿಕ್ಷಕ್ಕೆ ಹಾರಿಸಿತು. ಇಪ್ಪತ್ತಾರು ವರ್ಷ ವಯಸ್ಸಿನ ಆಕೆಯ ಹೆಸರು ವ್ಯಾಲೆಂಟಿನ ಟೆರೆಷ್ಕೋವ.<br /> <br /> ಅಂತರಿಕ್ಷ ನೌಕೆ ವೋಸ್ಕೋಕ್-6ರಲ್ಲಿ ಭೂಪ್ರದಕ್ಷಿಣೆ ಮಾಡುತ್ತಿರುವ ವ್ಯಾಲೆಂಟಿನ ಟೆರೆಷ್ಕೋವ ಅವರು ಟ್ರಕ್ ಚಾಲಕರೊಬ್ಬರ ಅವಿವಾಹಿತ ಪುತ್ರಿ. ಆಕೆ ಟೈರ್ ಕಾರ್ಖಾನೆಯೊಂದರಲ್ಲಿ ತನ್ನ ಕಾರ್ಮಿಕ ಜೀವನವನ್ನಾರಂಭಿಸಿದರು.<br /> <br /> <strong>ಮಾರಿ ಕಣ್ಣು ಹೋತನ ಮೇಲೆ; ಪಾಕ್ ಗಲಭೆಗಳಿಗೆ ಭಾರತ ಕಾರಣವಂತೆ!</strong><br /> ರಾವಲ್ಪಿಂಡಿ, ಜೂನ್ 16- ಪಾಕಿಸ್ತಾನದ ಹಲವೆಡೆ ಇತ್ತೀಚೆಗೆ ಉಂಟಾದ ಷಿಯ-ಸುನ್ನಿ ಗಲಭೆಗಳಿಗೆ ತಮ್ಮ ರಾಷ್ಟ್ರಕ್ಕೆ ಆಗಿಂದಾಗ್ಗೆ ಭೇಟಿ ಕೊಡುವ ಭಾರತದ ಉಲೇಮ ಮಾಡಿದ ಭಾಷಣಗಳೇ ಕಾರಣವಿರಬಹುದೆಂದು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕ ಸರ್ದಾರ್ ಬಹದ್ದೂರ್ಖಾನ್ ನಿನ್ನೆ ಅಭಿಪ್ರಾಯಪಟ್ಟರು.<br /> <br /> ಬಜೆಟ್ ಕುರಿತ ಚರ್ಚೆಯಲ್ಲಿ ಬಹದೂರ್ಖಾನ್ ಮಾತನಾಡುತ್ತಾ ಭಾರತದ ಉಲೇಮಗಳು ಪಾಕಿಸ್ತಾನಕ್ಕೆ ತಪ್ಪದೆ ಭೇಟಿ ಕೊಟ್ಟು ಭಾಷಣಗಳನ್ನು ಮಾಡುತ್ತಿರುವರೆಂದರು.<br /> <br /> <strong>ಇಂದಿನಿಂದ ಹಟ್ಟಿ ಚಿನ್ನದ ಗಣಿ </strong><strong>ಕಾರ್ಮಿಕ</strong><strong>ರ ಮುಷ್ಕರ?</strong><br /> ರಾಯಚೂರ್, ಜೂನ್ 16- ಕಾರ್ಮಿಕ ಬೇಡಿಕೆಗಳನ್ನು ತಕ್ಷಣ ಈಡೇರಿಸಿಕೊಡದೆ ನಾಳೆಯಿಂದ ಸಾರ್ವತ್ರಿಕ ಮುಷ್ಕರ ಹೂಡುವುದಾಗಿ ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಸಂಘ ಆಡಳಿತ ವರ್ಗಕ್ಕೆ ಸೂಚನೆ ಇತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಂತರಿಕ್ಷದಲ್ಲಿ ಮಹಿಳೆ: ರಷ್ಯದ ಹೊಸ ಪ್ರಯೋಗ</strong><br /> ಮಾಸ್ಕೊ, ಜೂನ್ 16- ವಿಶ್ವದ ಪ್ರಪ್ರಥಮ ಮಹಿಳಾ ಗಗನಯಾತ್ರಿಯನ್ನು ರಷ್ಯ ಇಂದು ಅಂತರಿಕ್ಷಕ್ಕೆ ಹಾರಿಸಿತು. ಇಪ್ಪತ್ತಾರು ವರ್ಷ ವಯಸ್ಸಿನ ಆಕೆಯ ಹೆಸರು ವ್ಯಾಲೆಂಟಿನ ಟೆರೆಷ್ಕೋವ.<br /> <br /> ಅಂತರಿಕ್ಷ ನೌಕೆ ವೋಸ್ಕೋಕ್-6ರಲ್ಲಿ ಭೂಪ್ರದಕ್ಷಿಣೆ ಮಾಡುತ್ತಿರುವ ವ್ಯಾಲೆಂಟಿನ ಟೆರೆಷ್ಕೋವ ಅವರು ಟ್ರಕ್ ಚಾಲಕರೊಬ್ಬರ ಅವಿವಾಹಿತ ಪುತ್ರಿ. ಆಕೆ ಟೈರ್ ಕಾರ್ಖಾನೆಯೊಂದರಲ್ಲಿ ತನ್ನ ಕಾರ್ಮಿಕ ಜೀವನವನ್ನಾರಂಭಿಸಿದರು.<br /> <br /> <strong>ಮಾರಿ ಕಣ್ಣು ಹೋತನ ಮೇಲೆ; ಪಾಕ್ ಗಲಭೆಗಳಿಗೆ ಭಾರತ ಕಾರಣವಂತೆ!</strong><br /> ರಾವಲ್ಪಿಂಡಿ, ಜೂನ್ 16- ಪಾಕಿಸ್ತಾನದ ಹಲವೆಡೆ ಇತ್ತೀಚೆಗೆ ಉಂಟಾದ ಷಿಯ-ಸುನ್ನಿ ಗಲಭೆಗಳಿಗೆ ತಮ್ಮ ರಾಷ್ಟ್ರಕ್ಕೆ ಆಗಿಂದಾಗ್ಗೆ ಭೇಟಿ ಕೊಡುವ ಭಾರತದ ಉಲೇಮ ಮಾಡಿದ ಭಾಷಣಗಳೇ ಕಾರಣವಿರಬಹುದೆಂದು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕ ಸರ್ದಾರ್ ಬಹದ್ದೂರ್ಖಾನ್ ನಿನ್ನೆ ಅಭಿಪ್ರಾಯಪಟ್ಟರು.<br /> <br /> ಬಜೆಟ್ ಕುರಿತ ಚರ್ಚೆಯಲ್ಲಿ ಬಹದೂರ್ಖಾನ್ ಮಾತನಾಡುತ್ತಾ ಭಾರತದ ಉಲೇಮಗಳು ಪಾಕಿಸ್ತಾನಕ್ಕೆ ತಪ್ಪದೆ ಭೇಟಿ ಕೊಟ್ಟು ಭಾಷಣಗಳನ್ನು ಮಾಡುತ್ತಿರುವರೆಂದರು.<br /> <br /> <strong>ಇಂದಿನಿಂದ ಹಟ್ಟಿ ಚಿನ್ನದ ಗಣಿ </strong><strong>ಕಾರ್ಮಿಕ</strong><strong>ರ ಮುಷ್ಕರ?</strong><br /> ರಾಯಚೂರ್, ಜೂನ್ 16- ಕಾರ್ಮಿಕ ಬೇಡಿಕೆಗಳನ್ನು ತಕ್ಷಣ ಈಡೇರಿಸಿಕೊಡದೆ ನಾಳೆಯಿಂದ ಸಾರ್ವತ್ರಿಕ ಮುಷ್ಕರ ಹೂಡುವುದಾಗಿ ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಸಂಘ ಆಡಳಿತ ವರ್ಗಕ್ಕೆ ಸೂಚನೆ ಇತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>