ನವದೆಹಲಿ, ಮೇ 4– ಭವ್ಯವಾದ ರಾಷ್ಟ್ರಪತಿ ಭವನದ ಉನ್ನತ ಗೋಪುರದ ಶ್ವೇತಮುಖಿ ಹಜಾರ್ ದರ್ಬಾರ್ ಸಭಾಂಗಣದಲ್ಲಿಡಲಾಗಿರುವ ದಿವಂಗತ ರಾಷ್ಟ್ರಪತಿ ಡಾ. ಜಾಕಿರ್ ಹುಸೇನರ ಪಾರ್ಥಿವ ಶರೀರದ ಮುಂದೆ ಇಂದು ಸಂಜೆ ಹೊತ್ತಿಗೆ ಐದು ಲಕ್ಷಕ್ಕೂ ಹೆಚ್ಚು ಶೋಕತಪ್ತ ಜನ ಹಾದುಹೋಗಿ ತಮ್ಮ ಅಂತಿಮ ಗೌರವವನ್ನು ಸಲ್ಲಿಸಿದರು. ಆಗಲಿದ ರಾಷ್ಟ್ರ ನಾಯಕನ ಅಂತಿಮ ದರ್ಶನಕ್ಕಾಗಿ ಸಹಸ್ರರು ಮಂದಿ ಸಾಲುಗಟ್ಟಿ ನಿಂತಿದ್ದರು.