<p>38 ಸ್ಥಾನಗಳನ್ನು ಗಳಿಸಿರುವ ಜೆಡಿಎಸ್ಗೆ 78 ಸ್ಥಾನಗಳ ಕಾಂಗ್ರೆಸ್, ಸರ್ಕಾರ ರಚನೆಗಾಗಿ ಸಾಥ್ ನೀಡಿರುವ ಬಗ್ಗೆ ಸಿನಿಕರನೇಕರು ಆಡಿಕೊಳ್ಳುತ್ತಿದ್ದಾರೆ. ಇದು ಮಾಮೂಲಿ ರಾಜಕೀಯ ಕೂಡುವಳಿಯಾಗಿದ್ದರೆ (Marriage of convenience) ವ್ಯಂಗ್ಯ ಸರಿಯಾದದ್ದೇ.</p>.<p>ಪ್ರಮುಖ ಖಾತೆಗಳಿಗಾಗಿ ಕಚ್ಚಾಟ ನಡೆದು ಸಮ್ಮಿಶ್ರ ಸರ್ಕಾರಗಳು ಉರುಳಿ, ಮರುಚುನಾವಣೆಗಳಾಗಿರುವುದು ದೇಶಕ್ಕೆ ಹೊಸತೇನಲ್ಲ. ಆದರೆ ಕರ್ನಾಟಕದಲ್ಲಿ ನಡೆದಿರುವ ಈ ಮೈತ್ರಿಯಲ್ಲಿ ಹೊಸ ಸಾಧ್ಯತೆ ಹಾಗೂ ದೂರಗಾಮಿ ಬೆಳವಣಿಗೆಗಳನ್ನು ಸಹ ಕಾಣಬಹುದಾಗಿದೆ.</p>.<p>ಮೈತ್ರಿಯ ಸ್ಪಷ್ಟ ಉದ್ದೇಶ, ಬಿಜೆಪಿಯನ್ನು ಅಧಿಕಾರದಿಂದ ಹೊರಗಿರಿಸಬೇಕೆಂಬುದೇನೋ ಹೌದು. ಆದರೂ ಸಾಕಷ್ಟು ಸಂಖ್ಯಾಬಲ ಗಳಿಸಿರುವ ರಾಷ್ಟ್ರೀಯ ಪಕ್ಷವೊಂದು ‘ಪ್ರಾದೇಶಿಕ’ ಎನ್ನುವ ಪಕ್ಷದ ಸರ್ಕಾರ ರಚಿಸಲು ಅವಕಾಶ ಮಾಡಿಕೊಡಲು ಮುಂದಾಗಿರುವುದು ಮಹತ್ವದ ಬೆಳವಣಿಗೆಯೇ ಹೌದು.</p>.<p>ಅಲ್ಪಾವಧಿಯ ಅಧಿಕಾರದ ಆಸೆಯೇ ಇದ್ದಿದ್ದರೆ ಜೆಡಿಎಸ್, ಬಿಜೆಪಿಯೊಂದಿಗೇ ಕೈ ಜೋಡಿಸಬಹುದಾಗಿತ್ತು. ಅದರಿಂದ ಕಾಂಗ್ರೆಸ್ ಪಕ್ಷ ಮೂಲೆಗುಂಪೂ ಆಗಿಬಿಡುತ್ತಿತ್ತು. ಆದರೆ ಬಿಜೆಪಿ ಜೊತೆ ಮೈತ್ರಿ ನಡೆಸಿದ ಮರುಕ್ಷಣವೇ ಜೆಡಿಎಸ್ ಹೇಳಹೆಸರಿಲ್ಲದಂತಾಗಿಬಿಡುತ್ತದೆ ಎನ್ನುವ ಜ್ಞಾನ ದೇವೇಗೌಡರಂತಹ ಮುತ್ಸದ್ದಿಗೆ ಖಚಿತವಾಗಿ ಇತ್ತು.</p>.<p>ಇನ್ನೊಂದು ಆಶಾದಾಯಕ ಬೆಳವಣಿಗೆ ಎಂದರೆ ಜೆಡಿಎಸ್, ತನ್ನ ‘ರಾಷ್ಟ್ರೀಯ ಪಕ್ಷ’ ಎಂಬ ಭ್ರಮೆಯನ್ನು ತೊರೆದು, ಪ್ರಾದೇಶಿಕ ಪಕ್ಷ ಎಂಬುದನ್ನು ಅಂತರಂಗದಲ್ಲಿ ಒಪ್ಪಿಕೊಂಡಿರುವುದು.</p>.<p>ಡಿಎಂಕೆ, ಬಿಎಸ್ಪಿ, ಟಿಡಿಪಿ ಹಾಗೂ ಇನ್ನಿತರ ಪ್ರಾದೇಶಿಕ ಪಕ್ಷಗಳಿಗೆ ಮಹತ್ವ ನೀಡಿ, ಮುಖಂಡರನ್ನು ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಿದ್ದು ಇದಕ್ಕೆ ಸಾಕ್ಷಿ. ಎಲ್ಲಾ ರಾಜ್ಯಗಳಲ್ಲಿ ಅದರದರದೇ ಪ್ರಾದೇಶಿಕ ಪಕ್ಷ ಆಡಳಿತ ನಡೆಸಬೇಕು. ರಾಷ್ಟ್ರಮಟ್ಟದಲ್ಲಿ, ಅವು ಧ್ರುವೀಕರಣಗೊಂಡು ನಿರ್ದಿಷ್ಟ ರಾಷ್ಟ್ರೀಯ ಪಕ್ಷಕ್ಕೆ ಬೆಂಬಲ ಸೂಚಿಸಬೇಕು.</p>.<p>ಅಂತಹ ಒಕ್ಕೂಟ ವ್ಯವಸ್ಥೆಗೆ ಈ ಸಮ್ಮಿಶ್ರ ಸರ್ಕಾರ ನಾಂದಿ ಹಾಡುವಂತಾದರೆ, ಕರ್ನಾಟಕದ ಮತದಾರ ನಿಜಕ್ಕೂ ಧನ್ಯನೇ ಸರಿ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>38 ಸ್ಥಾನಗಳನ್ನು ಗಳಿಸಿರುವ ಜೆಡಿಎಸ್ಗೆ 78 ಸ್ಥಾನಗಳ ಕಾಂಗ್ರೆಸ್, ಸರ್ಕಾರ ರಚನೆಗಾಗಿ ಸಾಥ್ ನೀಡಿರುವ ಬಗ್ಗೆ ಸಿನಿಕರನೇಕರು ಆಡಿಕೊಳ್ಳುತ್ತಿದ್ದಾರೆ. ಇದು ಮಾಮೂಲಿ ರಾಜಕೀಯ ಕೂಡುವಳಿಯಾಗಿದ್ದರೆ (Marriage of convenience) ವ್ಯಂಗ್ಯ ಸರಿಯಾದದ್ದೇ.</p>.<p>ಪ್ರಮುಖ ಖಾತೆಗಳಿಗಾಗಿ ಕಚ್ಚಾಟ ನಡೆದು ಸಮ್ಮಿಶ್ರ ಸರ್ಕಾರಗಳು ಉರುಳಿ, ಮರುಚುನಾವಣೆಗಳಾಗಿರುವುದು ದೇಶಕ್ಕೆ ಹೊಸತೇನಲ್ಲ. ಆದರೆ ಕರ್ನಾಟಕದಲ್ಲಿ ನಡೆದಿರುವ ಈ ಮೈತ್ರಿಯಲ್ಲಿ ಹೊಸ ಸಾಧ್ಯತೆ ಹಾಗೂ ದೂರಗಾಮಿ ಬೆಳವಣಿಗೆಗಳನ್ನು ಸಹ ಕಾಣಬಹುದಾಗಿದೆ.</p>.<p>ಮೈತ್ರಿಯ ಸ್ಪಷ್ಟ ಉದ್ದೇಶ, ಬಿಜೆಪಿಯನ್ನು ಅಧಿಕಾರದಿಂದ ಹೊರಗಿರಿಸಬೇಕೆಂಬುದೇನೋ ಹೌದು. ಆದರೂ ಸಾಕಷ್ಟು ಸಂಖ್ಯಾಬಲ ಗಳಿಸಿರುವ ರಾಷ್ಟ್ರೀಯ ಪಕ್ಷವೊಂದು ‘ಪ್ರಾದೇಶಿಕ’ ಎನ್ನುವ ಪಕ್ಷದ ಸರ್ಕಾರ ರಚಿಸಲು ಅವಕಾಶ ಮಾಡಿಕೊಡಲು ಮುಂದಾಗಿರುವುದು ಮಹತ್ವದ ಬೆಳವಣಿಗೆಯೇ ಹೌದು.</p>.<p>ಅಲ್ಪಾವಧಿಯ ಅಧಿಕಾರದ ಆಸೆಯೇ ಇದ್ದಿದ್ದರೆ ಜೆಡಿಎಸ್, ಬಿಜೆಪಿಯೊಂದಿಗೇ ಕೈ ಜೋಡಿಸಬಹುದಾಗಿತ್ತು. ಅದರಿಂದ ಕಾಂಗ್ರೆಸ್ ಪಕ್ಷ ಮೂಲೆಗುಂಪೂ ಆಗಿಬಿಡುತ್ತಿತ್ತು. ಆದರೆ ಬಿಜೆಪಿ ಜೊತೆ ಮೈತ್ರಿ ನಡೆಸಿದ ಮರುಕ್ಷಣವೇ ಜೆಡಿಎಸ್ ಹೇಳಹೆಸರಿಲ್ಲದಂತಾಗಿಬಿಡುತ್ತದೆ ಎನ್ನುವ ಜ್ಞಾನ ದೇವೇಗೌಡರಂತಹ ಮುತ್ಸದ್ದಿಗೆ ಖಚಿತವಾಗಿ ಇತ್ತು.</p>.<p>ಇನ್ನೊಂದು ಆಶಾದಾಯಕ ಬೆಳವಣಿಗೆ ಎಂದರೆ ಜೆಡಿಎಸ್, ತನ್ನ ‘ರಾಷ್ಟ್ರೀಯ ಪಕ್ಷ’ ಎಂಬ ಭ್ರಮೆಯನ್ನು ತೊರೆದು, ಪ್ರಾದೇಶಿಕ ಪಕ್ಷ ಎಂಬುದನ್ನು ಅಂತರಂಗದಲ್ಲಿ ಒಪ್ಪಿಕೊಂಡಿರುವುದು.</p>.<p>ಡಿಎಂಕೆ, ಬಿಎಸ್ಪಿ, ಟಿಡಿಪಿ ಹಾಗೂ ಇನ್ನಿತರ ಪ್ರಾದೇಶಿಕ ಪಕ್ಷಗಳಿಗೆ ಮಹತ್ವ ನೀಡಿ, ಮುಖಂಡರನ್ನು ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಿದ್ದು ಇದಕ್ಕೆ ಸಾಕ್ಷಿ. ಎಲ್ಲಾ ರಾಜ್ಯಗಳಲ್ಲಿ ಅದರದರದೇ ಪ್ರಾದೇಶಿಕ ಪಕ್ಷ ಆಡಳಿತ ನಡೆಸಬೇಕು. ರಾಷ್ಟ್ರಮಟ್ಟದಲ್ಲಿ, ಅವು ಧ್ರುವೀಕರಣಗೊಂಡು ನಿರ್ದಿಷ್ಟ ರಾಷ್ಟ್ರೀಯ ಪಕ್ಷಕ್ಕೆ ಬೆಂಬಲ ಸೂಚಿಸಬೇಕು.</p>.<p>ಅಂತಹ ಒಕ್ಕೂಟ ವ್ಯವಸ್ಥೆಗೆ ಈ ಸಮ್ಮಿಶ್ರ ಸರ್ಕಾರ ನಾಂದಿ ಹಾಡುವಂತಾದರೆ, ಕರ್ನಾಟಕದ ಮತದಾರ ನಿಜಕ್ಕೂ ಧನ್ಯನೇ ಸರಿ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>