‘ಕೇಜ್ರಿವಾಲರಿಗೆ ಹೆದರುತ್ತಾರೆಯೇ ಮೋದಿ?’ ಶೀರ್ಷಿಕೆಯ ಡಿ. ಉಮಾಪತಿಯವರ ಲೇಖನಕ್ಕೆ (ಪ್ರ.ವಾ., ಜ.1) ನನ್ನದೊಂದು ಜೋಡಣೆ. ಅರವಿಂದ ಕೇಜ್ರಿವಾಲ್ ಹಿಂದೆ ಒಮ್ಮೆ ಪ್ರಧಾನಿಯವರನ್ನು ‘ಸೈಕೋಪಾತ್’ ಎಂದು ಹೀಯಾಳಿಸಿದ್ದುದು ಮೋದಿಯವರನ್ನು ಕೆರಳಿಸಿರಬಹುದು. ಇದು ದ್ವೇಷಕ್ಕೂ ಎಡೆ ಮಾಡಿಕೊಟ್ಟಿರಬಹುದು.
ಕೇಜ್ರಿವಾಲರ ಮಾತು ಯಾವ ದೃಷ್ಟಿಯಿಂದಲೂ ಸಮ್ಮತವಲ್ಲ. ಈಗ ಕೇಜ್ರಿವಾಲ್ ಇದನ್ನು ಅನುಭವಿಸುತ್ತಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ಇದು ದೆಹಲಿಗೆ ಆದ ಹಿನ್ನಡೆ.