<p>‘ಮಠ ಸ್ವಾಧೀನ ಇಲ್ಲ’ (ಪ್ರ.ವಾ., ಫೆ. 9) ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ವಾಸ್ತವದಲ್ಲಿ ಈ ಇಡೀ ಪ್ರಕ್ರಿಯೆ ಮಠಗಳು ಅಥವಾ ಇತರ ಭಾರತೀಯ ಮೂಲದ ಧಾರ್ಮಿಕ ಕೇಂದ್ರಗಳ ‘ಸರ್ಕಾರೀಕರಣ’ದ ಉದ್ದೇಶದ್ದಾಗಿರಲಿಲ್ಲ.</p>.<p>ಸರ್ಕಾರ ಹೊರಡಿಸಿದ್ದ ಅಧಿಸೂಚನೆಯು ಈ ಕುರಿತು ನೇಮಿಸಲಾಗಿದ್ದ ಆಯೋಗ ಕೈಗೊಂಡ ಆರಂಭಿಕ ಕ್ರಮವೇ ಹೊರತು, ಅದು ಸರ್ಕಾರಿ ಆದೇಶವೇ ಆಗಿರಲಿಲ್ಲ. ಹೀಗಿರುವಾಗ ಸರ್ಕಾರ ಗುರುತರ ಅಪಚಾರ ಮಾಡಹೊರಟಿದೆಯೋ ಎಂಬಷ್ಟು ಗಾಬರಿಯಲ್ಲಿ, ಜನಾಭಿಪ್ರಾಯ ಕೋರುವ ಆದೇಶವನ್ನು ರದ್ದುಪಡಿಸುವ ತರಾತುರಿ ಬೇಕಾಗಿತ್ತೇ?</p>.<p>‘ಮಠ-ಮಾನ್ಯಗಳನ್ನೂ, ಮಸೀದಿ-ಇಗರ್ಜಿಗಳನ್ನೂ ಸರ್ಕಾರ ವಹಿಸಿಕೊಳ್ಳುವುದು ಉಚಿತವೇ’ ಎಂಬ ಬಗ್ಗೆ ಅಭಿಪ್ರಾಯ ತಿಳಿಸಲು ಜನರಿಗೆ ಇಲ್ಲೊಂದು ಅವಕಾಶವಿತ್ತು; ಅದನ್ನು ತಪ್ಪಿಸಲಾಯಿತು. ಧರ್ಮಸಂಸ್ಥೆಗಳ ಪಾತ್ರವು ನೈತಿಕ ಮತ್ತು ಆಧ್ಯಾತ್ಮಿಕ ತಳಹದಿಯದಾಗಿದ್ದು, ಈ ಆಯಾಮಗಳಲ್ಲಿ ಸರ್ಕಾರದ ಹಸ್ತಕ್ಷೇಪ ಬಿಲ್ಕುಲ್ ಕೂಡದು.</p>.<p>ಆದರೆ ಚರ್ಚ್, ಮಸೀದಿ, ಮಠ-ಮಂದಿರಗಳು ಕಂದಾಚಾರದ ಕೇಂದ್ರಗಳೂ, ಹಣಕಾಸಿನ ಅವ್ಯವಹಾರದ ತಾಣಗಳೂ ಆದಾಗ ಅವುಗಳ ಜುಟ್ಟು ಅಲುಗಾಡಿಸಿ ಕೇಳುವ ಹೊಣೆಗಾರಿಕೆ ಪ್ರಜಾಸತ್ತಾತ್ಮಕ ಸರ್ಕಾರದ ಮೇಲೆ ಅನಿವಾರ್ಯವಾಗಿ ಇದ್ದೇ ತೀರುತ್ತದೆ.</p>.<p>ಮುಖ್ಯಮಂತ್ರಿ ಗಲಿಬಿಲಿ, ಇಂಥ ಧಾರ್ಮಿಕ ಕೇಂದ್ರಗಳನ್ನು ತಡೆಯುವ ನೈತಿಕ ಧೈರ್ಯ ಸರ್ಕಾರಕ್ಕೆ ಇಲ್ಲ ಎನ್ನುವುದನ್ನು ತೋರಿಸುತ್ತದೆಯೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಮಠ ಸ್ವಾಧೀನ ಇಲ್ಲ’ (ಪ್ರ.ವಾ., ಫೆ. 9) ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ವಾಸ್ತವದಲ್ಲಿ ಈ ಇಡೀ ಪ್ರಕ್ರಿಯೆ ಮಠಗಳು ಅಥವಾ ಇತರ ಭಾರತೀಯ ಮೂಲದ ಧಾರ್ಮಿಕ ಕೇಂದ್ರಗಳ ‘ಸರ್ಕಾರೀಕರಣ’ದ ಉದ್ದೇಶದ್ದಾಗಿರಲಿಲ್ಲ.</p>.<p>ಸರ್ಕಾರ ಹೊರಡಿಸಿದ್ದ ಅಧಿಸೂಚನೆಯು ಈ ಕುರಿತು ನೇಮಿಸಲಾಗಿದ್ದ ಆಯೋಗ ಕೈಗೊಂಡ ಆರಂಭಿಕ ಕ್ರಮವೇ ಹೊರತು, ಅದು ಸರ್ಕಾರಿ ಆದೇಶವೇ ಆಗಿರಲಿಲ್ಲ. ಹೀಗಿರುವಾಗ ಸರ್ಕಾರ ಗುರುತರ ಅಪಚಾರ ಮಾಡಹೊರಟಿದೆಯೋ ಎಂಬಷ್ಟು ಗಾಬರಿಯಲ್ಲಿ, ಜನಾಭಿಪ್ರಾಯ ಕೋರುವ ಆದೇಶವನ್ನು ರದ್ದುಪಡಿಸುವ ತರಾತುರಿ ಬೇಕಾಗಿತ್ತೇ?</p>.<p>‘ಮಠ-ಮಾನ್ಯಗಳನ್ನೂ, ಮಸೀದಿ-ಇಗರ್ಜಿಗಳನ್ನೂ ಸರ್ಕಾರ ವಹಿಸಿಕೊಳ್ಳುವುದು ಉಚಿತವೇ’ ಎಂಬ ಬಗ್ಗೆ ಅಭಿಪ್ರಾಯ ತಿಳಿಸಲು ಜನರಿಗೆ ಇಲ್ಲೊಂದು ಅವಕಾಶವಿತ್ತು; ಅದನ್ನು ತಪ್ಪಿಸಲಾಯಿತು. ಧರ್ಮಸಂಸ್ಥೆಗಳ ಪಾತ್ರವು ನೈತಿಕ ಮತ್ತು ಆಧ್ಯಾತ್ಮಿಕ ತಳಹದಿಯದಾಗಿದ್ದು, ಈ ಆಯಾಮಗಳಲ್ಲಿ ಸರ್ಕಾರದ ಹಸ್ತಕ್ಷೇಪ ಬಿಲ್ಕುಲ್ ಕೂಡದು.</p>.<p>ಆದರೆ ಚರ್ಚ್, ಮಸೀದಿ, ಮಠ-ಮಂದಿರಗಳು ಕಂದಾಚಾರದ ಕೇಂದ್ರಗಳೂ, ಹಣಕಾಸಿನ ಅವ್ಯವಹಾರದ ತಾಣಗಳೂ ಆದಾಗ ಅವುಗಳ ಜುಟ್ಟು ಅಲುಗಾಡಿಸಿ ಕೇಳುವ ಹೊಣೆಗಾರಿಕೆ ಪ್ರಜಾಸತ್ತಾತ್ಮಕ ಸರ್ಕಾರದ ಮೇಲೆ ಅನಿವಾರ್ಯವಾಗಿ ಇದ್ದೇ ತೀರುತ್ತದೆ.</p>.<p>ಮುಖ್ಯಮಂತ್ರಿ ಗಲಿಬಿಲಿ, ಇಂಥ ಧಾರ್ಮಿಕ ಕೇಂದ್ರಗಳನ್ನು ತಡೆಯುವ ನೈತಿಕ ಧೈರ್ಯ ಸರ್ಕಾರಕ್ಕೆ ಇಲ್ಲ ಎನ್ನುವುದನ್ನು ತೋರಿಸುತ್ತದೆಯೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>