ಇತಿಹಾಸ, ಐತಿಹಾಸಿಕ ಘಟನೆಗಳು ಮತ್ತು ಚಾರಿತ್ರಿಕ ಮಹಾಪುರುಷರ ಸ್ಮರಣೆ ತಪ್ಪಲ್ಲ. ಆದರೆ ಅದಕ್ಕೊಂದು ರಚನಾತ್ಮಕ ಉದ್ದೇಶ ಮತ್ತು ವ್ಯವಸ್ಥೆ ಇಲ್ಲದಿದ್ದರೆ ಕಾರ್ಯಕ್ರಮ ಪ್ರಚಾರ- ಅಪಪ್ರಚಾರಗಳ ತೆವಲು ಮಾತ್ರವಾಗುತ್ತದೆ! ಗಂಗ, ಕದಂಬ, ರಾಷ್ಟ್ರಕೂಟ, ವಿಜಯನಗರ ಸಾಮ್ರಾಜ್ಯಗಳ ಬಗ್ಗೆ ಹೆಮ್ಮೆಪಡಲು, ಸಂಭ್ರಮಿಸಲು ಕನ್ನಡಿಗರಿಗೊಂದು ಸಾಂಸ್ಕೃತಿಕ ಕಾರಣವಿದೆ. ಆದರೆ ಬಹಮನಿ ರಾಜ್ಯದ ಉದಯ, ವಿಜಯನಗರ ಸಾಮ್ರಾಜ್ಯದೊಡನೆ ಅದರ ಸೆಣಸಾಟ, ಕೊನೆಗೆ ಮೊಘಲ್ ಸಾಮ್ರಾಜ್ಯದಲ್ಲಿ ಅದರ ವಿಲೀನ... ಈ ಕಥಾನಕದಲ್ಲಿ ಕನ್ನಡಿಗರು ಹೆಮ್ಮೆಪಡಲು ಸಾಧ್ಯವೇ?