ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಹೆಚ್ಚು–ಕಡಿಮೆ ಕುರ್ಚಿ ಭದ್ರ ಮಾಡಿಕೊಳ್ಳುವುದರಲ್ಲೇ ತಲ್ಲೀನರಾಗಿದ್ದಾರೆ. ರೈತರ ಸಾಲ ಮನ್ನಾ ಮಾಡಿದ್ದೇವೆಂದು ಹೇಳಿದರು. ಆದರೆ ರೈತರ ಆತ್ಮಹತ್ಯೆ ನಿಂತಿಲ್ಲ. ಸಾಲ ಮನ್ನಾವೊಂದೇ ಪರಿಹಾರವಲ್ಲ ಅನ್ನುವುದು ಸಾಬೀತಾಗಿದೆ. ವಿರೋಧ ಪಕ್ಷದವರೇ ಆಗಲಿ, ಆಡಳಿತ ಪಕ್ಷದ ರಾಜಕಾರಣಿಗಳೇ ಆಗಲಿ, ನಾಲ್ಕು ತಿಂಗಳಿಂದ ಅಧಿಕಾರಕ್ಕಾಗಿ, ಸ್ಥಾನಮಾನಕ್ಕಾಗಿ ಹೋರಾಡುತ್ತಿರುವುದು ಕಾಣಬರುತ್ತಿದೆಯೇ ವಿನಾ ಅಭಿವೃದ್ಧಿಯ ಹಂಬಲ ಮಾತ್ರ ಕಾಣಸಿಗದು.