ಮಥುರಾದಲ್ಲಿ ಮದ್ಯ, ಮಾಂಸಾಹಾರ ಮಾರಾಟ ನಿಷೇಧಕ್ಕೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮುಂದಾಗಿದ್ದಾರೆ ಎಂಬ ಸುದ್ದಿಗೆ ಬಾಲಕೃಷ್ಣ ಎಂ.ಆರ್. ಪ್ರತಿಕ್ರಿಯಿಸಿ, ‘ಹೀಗೆ ಮಾಡಿದರೆ ಅಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗುತ್ತದೆ. ಆದಿತ್ಯನಾಥ ಅವರು ಜನರನ್ನು ಸನ್ಯಾಸಿ ಮಾಡಲು ಹೊರಟಿದ್ದಾರೆ’ ಎಂದು ಹೇಳಿರುವುದು ಸರಿಯಲ್ಲ. ಮಾಂಸಾಹಾರ, ಮದ್ಯ ಸೇವಿಸದಿರುವವರೆಲ್ಲ ಸನ್ಯಾಸಿಗಳೇನೂ ಆಗಿರುವುದಿಲ್ಲ.