ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರು ಮತ ಯಾಚಿಸುವುದಕ್ಕೆ ಅವರ ಸ್ವಗ್ರಾಮ ತೆಲಸಂಗದಲ್ಲಿ ವಿರೋಧ ವ್ಯಕ್ತವಾಗಿರುವ ಸುದ್ದಿ ಓದಿ (ಪ್ರ.ವಾ., ನ. 30) ನಿಜಕ್ಕೂ ಸಂತಸವಾಯಿತು. ಪ್ರಸಕ್ತ ಸನ್ನಿವೇಶದಲ್ಲಿ ಈ ಗ್ರಾಮಸ್ಥರ ನಡೆ ಮಾದರಿಯಾದುದು. ನಮ್ಮ ಜನರಿಗೆ ಅಧಿಕಾರ ನೀಡುವುದೂ ಗೊತ್ತು ಕಸಿದುಕೊಳ್ಳುವುದೂ ಗೊತ್ತು ಎಂಬ ಮಾತು ಮುನ್ನೆಲೆಗೆ ಬಂದಂತಿದೆ.