‘ಅಯೋಧ್ಯಾ ಪ್ರಕರಣ ಕಲಿಸಿದ ಪಾಠ’ ಎಂಬ ಎ.ಸೂರ್ಯಪ್ರಕಾಶ್ ಅವರ ಲೇಖನ (ಪ್ರ.ವಾ., ಫೆ. 19) ಓದಿದೆ. ಅಯೋಧ್ಯಾ ವಿಷಯ ಈಗ ಬಗೆಹರಿದ ಅಧ್ಯಾಯ. ಅದನ್ನು ಮತ್ತೆ ಕೆದಕುತ್ತಾ ಕೂರುವ ಅಗತ್ಯ ಇಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದ ರಾಜಕೀಯ ಪಕ್ಷವನ್ನು ಲೇಖಕರು ಹೊಗಳಿದ್ದಾರೆ. ಹೊಗಳಲಿ, ಅದು ಅವರ ಹಕ್ಕು. ಆದರೆ ಗೆದ್ದ ರಾಜಕೀಯ ಪಕ್ಷವನ್ನು ಹೊಗಳುವ ಭರದಲ್ಲಿ, ಸೋತ ಪಕ್ಷಗಳ ಮಾತನ್ನು ಹೀನಾಯವಾಗಿ ಕಾಣುವುದು ತರವಲ್ಲ.