‘ಕೊರೊನಾ ಮತ್ತು ಸಕಾರಾತ್ಮಕ ಚಿಂತನೆ’ ಎಂಬ ಡಾ. ಕೆ.ಆರ್.ಶ್ರೀಧರ್ ಅವರ ಲೇಖನವು (ಸಂಗತ, ಜುಲೈ 15) ಅರ್ಥಪೂರ್ಣ ಹಾಗೂ ಉಪಯುಕ್ತವಾಗಿದೆ. ಕೊರೊನಾ ಸೋಂಕನ್ನು ಎದುರಿಸಲು ವೈದ್ಯಕೀಯ ಚಿಕಿತ್ಸೆಯಷ್ಟೇ ಸಾಲದು.ಅದರ ಜೊತೆಗೆ ಧೈರ್ಯ, ಮನೋಬಲ ಹಾಗೂ ಆತ್ಮಸ್ಥೈರ್ಯವೂ ಅಷ್ಟೇ ಅವಶ್ಯ.
ಸುಮ್ಮನೆ ಯಾರ್ಯಾರೋ ಏನೇನೋ ಹೇಳಿದ್ದನ್ನು ಕೇಳಿ ಧೃತಿಗೆಡದೆ, ನಾವೆಲ್ಲ ಧೈರ್ಯದಿಂದ ಕೋವಿಡ್ ರೋಗವನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ. -ರಿಯಾಝ್ ಅಹ್ಮದ್,ರೋಣ