ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾಸಂಸ್ಥೆಗಳ ಪಾವಿತ್ರ್ಯ ಕಾಪಾಡಿ

Last Updated 17 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ವಿವಿಧ ಹಂತದ ಚುನಾವಣೆಗಳು ನಡೆಯುವಾಗ, ಈ ಕಾರ್ಯದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮಗಳು ಇದ್ದೇ ಇರುತ್ತವೆ. ಇದಕ್ಕಾಗಿ ಶಾಲಾ ಕಾಲೇಜುಗಳ ಕೊಠಡಿಗಳನ್ನು ಬಳಸಿಕೊಳ್ಳುವ ಆಡಳಿತ ವ್ಯವಸ್ಥೆಯು ಅದನ್ನು ಸರಿಯಾಗಿ ನಿರ್ವಹಿಸಬೇಕಾದ ಅಗತ್ಯ ಇರುತ್ತದೆ. ಆದರೆ ಹಲವೆಡೆ ತರಗತಿಯ ಕೊಠಡಿಗಳಿಗೆ ಬಣ್ಣದ ಗಮ್‍ಟೇಪು ಅಂಟಿಸುವುದು, ಪೆಯಿಂಟ್ ಅಥವಾ ಬಣ್ಣದಿಂದ ಬೇಕಾಬಿಟ್ಟಿ ಗೆರೆಗಳನ್ನು ಎಳೆಯುವುದು, ಕಪ್ಪುಹಲಗೆ, ಗ್ರೀನ್‍ಬೋರ್ಡ್‍ಗಳಿಗೆ ಅಂಟುಹಾಕಿದ ಹಾಳೆಗಳನ್ನು ತೇಪೆ ಹಾಕುವುದು ಕಂಡುಬರುತ್ತದೆ.

ಇಷ್ಟುಮಾತ್ರವಲ್ಲ, ತರಬೇತಿಗೆ ಬರುವ ಕೆಲವು ಸಿಬ್ಬಂದಿ ತಮ್ಮ ಪಾದರಕ್ಷೆಗಳ ಸಮೇತ ಬಿಳಿಗೋಡೆಗೆ ಕಾಲುಕೊಟ್ಟು ವಾಲಿಕೊಂಡು ನಿಂತುಕೊಳ್ಳುವುದೂ ಇರುತ್ತದೆ. ಇದರಿಂದ ಗೋಡೆ ಮೇಲೆಲ್ಲ ಕೊಳಕು ಚಿತ್ರಗಳು ಮೂಡುತ್ತವೆ. ಇಂತಹ ಸಂದರ್ಭದಲ್ಲಿ ವಿದ್ಯಾಸಂಸ್ಥೆಗಳ ಪಾವಿತ್ರ್ಯ ಕಾಯ್ದುಕೊಳ್ಳುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

-ಸಂಪತ್ ಬೆಟ್ಟಗೆರೆ, ಮೂಡಿಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT