<p>ರಾಜ್ಯ ಸರ್ಕಾರ ಇದೇ 6ರಿಂದ 6, 7 ಮತ್ತು 8ನೇ ತರಗತಿಗಳನ್ನು ಪ್ರಾರಂಭಿಸಲು ನಿರ್ಧರಿಸಿರುವುದು ಸ್ವಾಗತಾರ್ಹ. ಸುಮಾರು ಒಂದೂವರೆ ವರ್ಷ ಕಾಲ ಈ ಮಕ್ಕಳು ಶಿಕ್ಷಣದಿಂದ ದೂರವಿದ್ದರು. ಲೆಕ್ಕಕ್ಕಷ್ಟೇ ಎಂಬಂತಿದ್ದ ಆನ್ಲೈನ್ ತರಗತಿಗಳಿಗೆ ಎಲ್ಲ ವಿದ್ಯಾರ್ಥಿಗಳನ್ನೂ ತಲುಪಲು ಸಾಧ್ಯವಾಗಿಲ್ಲ. ದುಬಾರಿ ಮೊಬೈಲ್ ಹಾಗೂ ನೆಟ್ವರ್ಕ್ ಸಮಸ್ಯೆ ದೊಡ್ಡ ಸವಾಲಾಗಿತ್ತು. ಈ ನಡುವೆ ಪ್ರಾರಂಭಿಸಿದ ವಿದ್ಯಾಗಮ, ವಠಾರ ಶಾಲೆಗಳು ಹೆಸರಿಗೆ ಮಾತ್ರ ಎಂಬಂತಿದ್ದವು.</p>.<p>ಅಗತ್ಯವಾದ ಸುರಕ್ಷಾ ಕ್ರಮಗಳನ್ನು ಕೈಗೊಂಡು ಶಾಲೆಯನ್ನು ಪ್ರಾರಂಭಿಸುವುದೊಂದೇ ಸಾಧ್ಯವಿರುವ ಮಾರ್ಗ. ಕಲಿಕೆಯಿಂದ ದೂರವಿದ್ದ ವಿದ್ಯಾರ್ಥಿಗಳನ್ನು ಮತ್ತೆ ಆ ವಾತಾವರಣಕ್ಕೆ ಒಗ್ಗಿಸಲು ಕನಿಷ್ಠ ತಿಂಗಳಾದರೂ ಅಗತ್ಯವಿದೆ. ಸರ್ಕಾರ ಪ್ರಸ್ತುತ ತೆಗೆದುಕೊಂಡಿರುವ ನಿರ್ಧಾರದ ಜೊತೆಗೆ ಸಾಧ್ಯವಾದಷ್ಟು ಬೇಗ ಒಂದರಿಂದ ಐದನೇ ತರಗತಿಗಳನ್ನೂ ಪ್ರಾರಂಭಿಸಲು ಮುಂದಾಗಲಿ ಹಾಗೂ ಬಿಸಿಯೂಟದ ವ್ಯವಸ್ಥೆಯೂ ಪ್ರಾರಂಭವಾಗಲಿ.</p>.<p><em><strong><span class="media-container dcx_media_rtab " data-dcx_media_config="{}" data-dcx_media_parsed="true" data-dcx_media_type="rtab" data-mce-contenteditable="false">–</span>ಈ.ಬಸವರಾಜು, <span class="Designate">ಬೆಂಗಳೂರು</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯ ಸರ್ಕಾರ ಇದೇ 6ರಿಂದ 6, 7 ಮತ್ತು 8ನೇ ತರಗತಿಗಳನ್ನು ಪ್ರಾರಂಭಿಸಲು ನಿರ್ಧರಿಸಿರುವುದು ಸ್ವಾಗತಾರ್ಹ. ಸುಮಾರು ಒಂದೂವರೆ ವರ್ಷ ಕಾಲ ಈ ಮಕ್ಕಳು ಶಿಕ್ಷಣದಿಂದ ದೂರವಿದ್ದರು. ಲೆಕ್ಕಕ್ಕಷ್ಟೇ ಎಂಬಂತಿದ್ದ ಆನ್ಲೈನ್ ತರಗತಿಗಳಿಗೆ ಎಲ್ಲ ವಿದ್ಯಾರ್ಥಿಗಳನ್ನೂ ತಲುಪಲು ಸಾಧ್ಯವಾಗಿಲ್ಲ. ದುಬಾರಿ ಮೊಬೈಲ್ ಹಾಗೂ ನೆಟ್ವರ್ಕ್ ಸಮಸ್ಯೆ ದೊಡ್ಡ ಸವಾಲಾಗಿತ್ತು. ಈ ನಡುವೆ ಪ್ರಾರಂಭಿಸಿದ ವಿದ್ಯಾಗಮ, ವಠಾರ ಶಾಲೆಗಳು ಹೆಸರಿಗೆ ಮಾತ್ರ ಎಂಬಂತಿದ್ದವು.</p>.<p>ಅಗತ್ಯವಾದ ಸುರಕ್ಷಾ ಕ್ರಮಗಳನ್ನು ಕೈಗೊಂಡು ಶಾಲೆಯನ್ನು ಪ್ರಾರಂಭಿಸುವುದೊಂದೇ ಸಾಧ್ಯವಿರುವ ಮಾರ್ಗ. ಕಲಿಕೆಯಿಂದ ದೂರವಿದ್ದ ವಿದ್ಯಾರ್ಥಿಗಳನ್ನು ಮತ್ತೆ ಆ ವಾತಾವರಣಕ್ಕೆ ಒಗ್ಗಿಸಲು ಕನಿಷ್ಠ ತಿಂಗಳಾದರೂ ಅಗತ್ಯವಿದೆ. ಸರ್ಕಾರ ಪ್ರಸ್ತುತ ತೆಗೆದುಕೊಂಡಿರುವ ನಿರ್ಧಾರದ ಜೊತೆಗೆ ಸಾಧ್ಯವಾದಷ್ಟು ಬೇಗ ಒಂದರಿಂದ ಐದನೇ ತರಗತಿಗಳನ್ನೂ ಪ್ರಾರಂಭಿಸಲು ಮುಂದಾಗಲಿ ಹಾಗೂ ಬಿಸಿಯೂಟದ ವ್ಯವಸ್ಥೆಯೂ ಪ್ರಾರಂಭವಾಗಲಿ.</p>.<p><em><strong><span class="media-container dcx_media_rtab " data-dcx_media_config="{}" data-dcx_media_parsed="true" data-dcx_media_type="rtab" data-mce-contenteditable="false">–</span>ಈ.ಬಸವರಾಜು, <span class="Designate">ಬೆಂಗಳೂರು</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>