ಸಿ.ಎಂ.ಉದಾಸಿ ಅವರ ನಿಧನದಿಂದ ತೆರವಾದ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅವರ ಪುತ್ರ ಹಾಲಿ ಸಂಸದ ಶಿವಕುಮಾರ್ ಉದಾಸಿ ಅವರನ್ನು ಕಣಕ್ಕಿಳಿಸುವ ಇಂಗಿತವನ್ನು ಸಚಿವ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ಜೂನ್ 10). ಪಕ್ಷದ ಅಭಿವೃದ್ಧಿಗೆ ಇಂಥ ಆಲೋಚನೆಗಳು ಸರಿಯೆನಿಸಬಹುದು. ಹಾಲಿ ಸಂಸದರು ಮತ್ತೊಂದು ಚುನಾವಣೆಗೆ ಸ್ಪರ್ಧಿಸುವುದಕ್ಕೆ ಸಂವಿಧಾನ ಅಡ್ಡಿ ಬರದೇ ಇದ್ದರೂ ಪ್ರಸಕ್ತ ಸಾಮಾಜಿಕ ಬೆಳವಣಿಗೆಯಲ್ಲಿ ಇಂಥ ಸ್ಪರ್ಧೆ ಅಗತ್ಯವೇ ಎಂಬ ಅಂಶ ಚರ್ಚೆಯಾಗಬೇಕು. ಮಿಗಿಲಾಗಿ, ತಂದೆಯ ಜಾಗವನ್ನು ಪುತ್ರ ತುಂಬುತ್ತಾರೆ ಎಂಬ ಮಾತು ಕೂಡ ‘ಜನತಂತ್ರ ವ್ಯವಸ್ಥೆಯಡಿ ಒಪ್ಪುವಂಥದ್ದಲ್ಲ’. ಈಗಾಗಲೇ ಸಮಾಜ ಈ ವಿಚಾರದಲ್ಲಿ ರೋಸಿ ಹೋಗಿದೆ.