ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಆನೆಗೆ ಅಂಕುಶ: ಸ್ವಭಾವ ಅರಿಯಬೇಕಿದೆ

Last Updated 14 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

‘ಆನೆಗೆ ಅಂಕುಶ’ ಎಂಬ ವರದಿ (ಪ್ರ.ವಾ‌., ಆ. 14) ಓದಿದಾಗ, ಕಾಡಾನೆಗಳಿಗೆ ಅಂಕುಶ ಹಾಕಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿತು. ಆನೆಗಳನ್ನು ನಿಯಂತ್ರಿಸಲು ಸೌರಬೇಲಿ, ಜೇನುಬೇಲಿ, ಪಟಾಕಿ ಸಿಡಿಸುವುದು, ತಡೆಗೋಡೆ ನಿರ್ಮಾಣ ಇನ್ನೂ ಅನೇಕಾನೇಕ ಉಪಾಯಗಳನ್ನು ಉತ್ತೇಜಿಸಲು ಸರ್ಕಾರ ಮುಂದಾಗಿದೆ. ಈ ಎಲ್ಲಾ ಉಪಾಯಗಳು ಮನುಷ್ಯನ ಪರವಾಗಿವೆಯೇ ವಿನಾ ಆನೆಗಳ ಪರವಾಗಿ ಇಲ್ಲ. ಅಂದರೆ ಈ ಉಪಾಯಗಳೆಲ್ಲಾ ಆನೆಗಳನ್ನು ಹೇಗೆಲ್ಲಾ ವಿಧ ವಿಧವಾಗಿ ಕೆರಳಿಸಬಹುದು ಎಂಬುದಕ್ಕೆ ಸಹಕಾರಿಯಾಗಿವೆ. ಅಲ್ಲದೆ ಈ ನಿರ್ಬಂಧಗಳನ್ನು ಆನೆಗಳು ಹೇಗೆಲ್ಲಾ ದಾಟಿವೆ ಎಂಬುದನ್ನು ಈ ಹಿಂದೆ ಅವುಗಳೇ ತಿಳಿಸಿಕೊಟ್ಟಿವೆ. ಹಾಗಾಗಿ ಮೂಲಭೂತವಾಗಿ ಆನೆಗಳ ಸ್ವಭಾವವನ್ನು ಅರಿತುಕೊಳ್ಳುವ ಗೋಜಿಗೆ ಹೋಗದೇ ಅವುಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ.

-ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT