ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಸ್ವಾಮೀಜಿಗಳು ಅಭಿನಂದನಾರ್ಹರು

Last Updated 6 ಜನವರಿ 2021, 15:34 IST
ಅಕ್ಷರ ಗಾತ್ರ

ಗದಗದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಡೆದ ಶಾರದಾ ದೇವಿ ಅವರ 168ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ, ಕೊರೊನಾ ವಾರಿಯರ್ಸ್‌ ಆಗಿ ಸೇವೆ ಸಲ್ಲಿಸಿದ ಮಾತೆಯರನ್ನು ಜೀವಂತ ಶಾರದೆಯರೆಂದು ಪೂಜಿಸಿ ಅವರಿಗೆ ಮೂವರು ಸ್ವಾಮೀಜಿಗಳು ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ (ಪ್ರ.ವಾ., ಜ. 6). ಚಿತ್ರದಲ್ಲಿನ ಈ ದೃಶ್ಯವನ್ನು ನೋಡಿ ಹೃದಯ ತುಂಬಿಬಂತು. ಕೊರೊನಾ ವಿರುದ್ಧ ಹೋರಾಡಿದವರಲ್ಲೇ ಶಾರದಾ ಮಾತೆಯನ್ನು ಕಂಡ ಸ್ವಾಮೀಜಿಗಳು ಅಭಿನಂದನಾರ್ಹರು. ಸೇವೆಯೇ ದೈವ, ಸೇವಕನೇ ದೇವರು ಎಂಬ ಸಿರಿ ಪರಿಕಲ್ಪನೆಯ ಸಾಕಾರಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕೇ?

–ಬಿಂಡಿಗನವಿಲೆ ಭಗವಾನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT