ಕೊರೊನಾ ಸೋಂಕಿನಿಂದ ದೇಶದೆಲ್ಲೆಡೆ ಅನಾರೋಗ್ಯ, ಲಾಕ್ಡೌನ್, ನಿರುದ್ಯೋಗ, ವೇತನ ಕುಸಿತ, ಬೇಡಿಕೆಯಲ್ಲಿನ ಕೊರತೆ, ತಗ್ಗಿದ ಹೂಡಿಕೆಯಂತಹ ಕಾರಣಗಳಿಂದ ಎಲ್ಲಾ ಬಗೆಯ ಆರ್ಥಿಕ ಚಟುವಟಿಕೆಗಳು ಕುಸಿಯುತ್ತಿವೆ. ಇಂತಹ ಸಂದರ್ಭದಲ್ಲಿ ಸರ್ಕಾರವು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸುವುದರ ಜೊತೆಗೆ ಸರ್ಕಾರಿ ಹೂಡಿಕೆಯನ್ನು ಹೆಚ್ಚಿಸಲು ಗಮನ ನೀಡಬೇಕು. ಅಲ್ಲದೆ, ದೇಶದಲ್ಲಿ ಹಣದ ಚಲಾವಣೆಗೆ ಕೇಂದ್ರ ಬ್ಯಾಂಕ್ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.