ಕೊರೊನಾ-2 ವೈರಸ್ನಿಂದ ಭಯಭೀತರಾಗಿ ವಿಶ್ವದಾದ್ಯಂತ ಜನರು ತಮ್ಮ ಓಡಾಟದ ಮೇಲೆ ನಿರ್ಬಂಧ ಹೇರಿಕೊಂಡಿದ್ದಾರೆ.
ಭಾರತದ ಪ್ರವಾಸೋ ದ್ಯಮ, ಹೋಟೆಲ್, ಮಾಲ್ಗಳು, ಚಿತ್ರಮಂದಿರಗಳು, ಸಾರಿಗೆ ಸಂಪರ್ಕ, ಬೀದಿ ಬದಿ ವ್ಯಾಪಾರ, ಕುಕ್ಕುಟೋದ್ಯಮ ಸೇರಿದಂತೆ ಎಲ್ಲ ರೀತಿಯ ವ್ಯಾಪಾರ ವಹಿವಾಟು ಕನಿಷ್ಠ ಮಟ್ಟಕ್ಕೆ ಬಂದು ನಿಂತಿದೆ.
ಆದ್ದರಿಂದ ಕೇಂದ್ರ ಸರ್ಕಾರವು ವ್ಯಾಪಾರಿಗಳಿಂದ ಈ ಮಾರ್ಚ್ ತಿಂಗಳು ಸಂಗ್ರಹಿಸಬೇಕಿರುವ ಮುಂಗಡ ತೆರಿಗೆ ಮತ್ತು ಜಿ.ಎಸ್.ಟಿ ಕಟ್ಟಲು ಸ್ವಲ್ಪ ಸಮಯಾವಕಾಶ ನೀಡಬೇಕು. ಇದರಿಂದ ವ್ಯಾಪಾರಿಗಳು ಒಂದಿಷ್ಟು ನಿಟ್ಟುಸಿರು ಬಿಡುವಂತೆ ಆಗುತ್ತದೆ.