ಅನ್ಯರು ತನ್ನ ತಪ್ಪು ತೋರಿಸಿದಾಗ ಎಚ್ಚೆತ್ತುಕೊಂಡು ನಡೆಯುವವನು ನಿಜವಾದ ನಾಯಕ. ಆನೆ ನಡೆದದ್ದೇ ದಾರಿ ಎಂಬಂತೆ ಆಗಬಾರದು. ಅದರಲ್ಲೂ ಟೀಕಿಸಿರುವವರು ಸಾಮಾನ್ಯರಲ್ಲ. ಇಂದಿನ ಮಕ್ಕಳನ್ನು ಮುಂದಿನ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಹೊಣೆ ಹೊತ್ತ ಶಿಕ್ಷಕರು. ಸರ್ಕಾರದ ಈ ನಡೆ ಸಾಧುವಲ್ಲ, ಕೂಡಲೇ ಅವರ ಅಮಾನತನ್ನು ಹಿಂಪಡೆಯಲಿ. ಅಂದಹಾಗೆ, ಮುಖ್ಯಮಂತ್ರಿ ಟೀಕಾತೀತರೇ, ಪ್ರಶ್ನಾತೀತರೇ?