ಪ್ರಸ್ತುತ ನಿಗಮಗಳಿಗೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು, ಆಡಳಿತ ಪಕ್ಷದ ಪ್ರಭಾವಿ ನಾಯಕರ ಸಂಬಂಧಿಕರು, ಪಕ್ಷದ ಅತೃಪ್ತ ಶಾಸಕರು ಹಾಗೂ ಆಡಳಿತ ಪಕ್ಷದ ಪ್ರಭಾವಿ ನಾಯಕರೇ ಹೆಚ್ಚಾಗಿ ಅಧ್ಯಕ್ಷರಾಗಿರುವುದನ್ನು ಕಾಣುತ್ತೇವೆ.
ಇಂತಹವರ ಬದಲಿಗೆ, ನಿಗಮಗಳಿಗೆ ಅಧ್ಯಕ್ಷರನ್ನಾಗಿ ತಜ್ಞರನ್ನು, ಉತ್ತಮ ಆಡಳಿತ ಅಧಿಕಾರಿಗಳನ್ನು ಅಥವಾ ರಾಜಕೀಯೇತರ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಿದರೆ ಅದರಿಂದ ನಿಗಮಗಳ ಮೂಲಕ ಸಮಾಜಮುಖಿ ಕಾರ್ಯಗಳು ಆಗುತ್ತವೆ. ಆಡಳಿತ ಪಕ್ಷಕ್ಕೆ ಒಳ್ಳೆಯ ಹೆಸರು ಸಹ ಬರುತ್ತದೆ. -ನಾಗರಾಜ್ ನೀರಲಗಿ,ಧಾರವಾಡ