ಬೃಹತ್ ನೀರಾವರಿ ಕಾಮಗಾರಿಗಳಲ್ಲಿ ನೂರಾರು ಕೋಟಿ ರೂಪಾಯಿ ಗುಳುಂ ಆಗಿರುವ ಸುದ್ದಿ (ಪ್ರ.ವಾ., ಡಿ. 17)
ಆಘಾತಕಾರಿಯಾದುದೇನೂ ಅಲ್ಲ! ಯಾಕೆಂದರೆ ಜಲಸಂಪನ್ಮೂಲ ಇಲಾಖೆ ಮತ್ತು ನೀರಾವರಿ ನಿಗಮಗಳಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ಎಲ್ಲರಿಗೂ ತಿಳಿದ ವಿಷಯವೇ. ದರಪಟ್ಟಿಗಳಲ್ಲಿ ಏರುಪೇರು, ವಿಳಂಬದ ಕಾಮಗಾರಿಗೆ ಏರಿದ ಬೆಲೆಗಳ ನೆಪ... ಹೀಗೆ ಹಲವಾರು ಹಂತಗಳಲ್ಲಿ ಟೆಂಡರ್ ಮೊತ್ತವನ್ನು ಹಿಗ್ಗಿಸುವುದರಲ್ಲಿ ಅಲ್ಲಿರುವವರು ನಿಸ್ಸೀಮರೆ. ಇಂತಹವರಿಗೆ ಕಾಮಗಾರಿಗಳ ಸಕಾಲಿಕ ಅನುಷ್ಠಾನ, ನಿಯತ್ತು, ಸಾರ್ವಜನಿಕರ ಟೀಕೆ, ಟಿಪ್ಪಣಿಗಳ ಬಗ್ಗೆ ಅಂಜಿಕೆ ಎಲ್ಲ ಎಲ್ಲಿ ಬರಬೇಕು?