<p>ರಾಜ್ಯ ಸರ್ಕಾರದ ವಿಮಾ ಇಲಾಖೆಯನ್ನು ಸರ್ಕಾರಿ ನೌಕರರ ಹಿತ ಕಾಪಾಡುವ, ಅಗತ್ಯಗಳನ್ನು ಪೂರೈಸುವ ಸಂಸ್ಥೆಯಾಗಿ ಕಟ್ಟಿ ಬೆಳೆಸಿದವರು ವಿಶ್ವೇಶ್ವರಯ್ಯನವರು. ಆದರೆ ಇಂದು ಅದು ಸರ್ಕಾರದ ಅತ್ಯಂತ ಭ್ರಷ್ಟ ಇಲಾಖೆಗಳಲ್ಲಿ ಒಂದಾಗಿದೆ ಎಂಬ ಆರೋಪ ಹೊತ್ತಿದೆ. ನೌಕರರು ತಾವೇ ಜಮೆ ಮಾಡಿದ ಹಣವನ್ನು ವಾಪಸ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಎಲ್ಲ ಕೆಲಸಕ್ಕೂ ಹೆಚ್ಚಿನ ಸಿಬ್ಬಂದಿ ನಿರ್ಲಜ್ಜೆಯಿಂದ ಲಂಚಕ್ಕೆ ಕೈಯೊಡ್ಡುತ್ತಾರೆ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ನನಗೆ ಖುದ್ದಾಗಿ ಇಂತಹ ಅನುಭವವಾಯಿತು.</p>.<p>ಇಲಾಖೆಯು ಭ್ರಷ್ಟಾಚಾರದ ಕೂಪವಾಗಲು ಒಂದು ಪ್ರಮುಖ ಕಾರಣವು ಗಣಕೀಕರಣಗೊಳ್ಳದಿರುವುದು. ಯಾವುದೇ ಮಾಹಿತಿ ಪಡೆಯಬೇಕೆಂದರೆ ಹಲವಾರು ಬಾರಿ ಕಚೇರಿಗೆ ಅಲೆದಾಡಬೇಕಾಗುತ್ತದೆ. ದೂರದ ಊರುಗಳಿಂದ ಜಿಲ್ಲಾ ಕೇಂದ್ರಕ್ಕೆ ಬರುವ ನೌಕರರು, ಹಲವು ಬಾರಿ ತಿರುಗಿ ಹೈರಾಣಾಗುವುದಕ್ಕಿಂತ ಲಂಚ ನೀಡುವುದೇ ಒಳ್ಳೆಯದು ಎಂಬ ನಿರ್ಧಾರಕ್ಕೆ ಬರುತ್ತಾರೆ. ಇಂತಹ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬೇಕೆಂದರೆ ಇಲಾಖೆಯನ್ನು ಗಣಕೀಕರಣಗೊಳಿಸುವುದು ಅತ್ಯವಶ್ಯಕ.</p>.<p><em><strong>-ಎಸ್.ಆರ್.ಬಿರಾದಾರ, ವಿಜಯಪುರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯ ಸರ್ಕಾರದ ವಿಮಾ ಇಲಾಖೆಯನ್ನು ಸರ್ಕಾರಿ ನೌಕರರ ಹಿತ ಕಾಪಾಡುವ, ಅಗತ್ಯಗಳನ್ನು ಪೂರೈಸುವ ಸಂಸ್ಥೆಯಾಗಿ ಕಟ್ಟಿ ಬೆಳೆಸಿದವರು ವಿಶ್ವೇಶ್ವರಯ್ಯನವರು. ಆದರೆ ಇಂದು ಅದು ಸರ್ಕಾರದ ಅತ್ಯಂತ ಭ್ರಷ್ಟ ಇಲಾಖೆಗಳಲ್ಲಿ ಒಂದಾಗಿದೆ ಎಂಬ ಆರೋಪ ಹೊತ್ತಿದೆ. ನೌಕರರು ತಾವೇ ಜಮೆ ಮಾಡಿದ ಹಣವನ್ನು ವಾಪಸ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಎಲ್ಲ ಕೆಲಸಕ್ಕೂ ಹೆಚ್ಚಿನ ಸಿಬ್ಬಂದಿ ನಿರ್ಲಜ್ಜೆಯಿಂದ ಲಂಚಕ್ಕೆ ಕೈಯೊಡ್ಡುತ್ತಾರೆ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ನನಗೆ ಖುದ್ದಾಗಿ ಇಂತಹ ಅನುಭವವಾಯಿತು.</p>.<p>ಇಲಾಖೆಯು ಭ್ರಷ್ಟಾಚಾರದ ಕೂಪವಾಗಲು ಒಂದು ಪ್ರಮುಖ ಕಾರಣವು ಗಣಕೀಕರಣಗೊಳ್ಳದಿರುವುದು. ಯಾವುದೇ ಮಾಹಿತಿ ಪಡೆಯಬೇಕೆಂದರೆ ಹಲವಾರು ಬಾರಿ ಕಚೇರಿಗೆ ಅಲೆದಾಡಬೇಕಾಗುತ್ತದೆ. ದೂರದ ಊರುಗಳಿಂದ ಜಿಲ್ಲಾ ಕೇಂದ್ರಕ್ಕೆ ಬರುವ ನೌಕರರು, ಹಲವು ಬಾರಿ ತಿರುಗಿ ಹೈರಾಣಾಗುವುದಕ್ಕಿಂತ ಲಂಚ ನೀಡುವುದೇ ಒಳ್ಳೆಯದು ಎಂಬ ನಿರ್ಧಾರಕ್ಕೆ ಬರುತ್ತಾರೆ. ಇಂತಹ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬೇಕೆಂದರೆ ಇಲಾಖೆಯನ್ನು ಗಣಕೀಕರಣಗೊಳಿಸುವುದು ಅತ್ಯವಶ್ಯಕ.</p>.<p><em><strong>-ಎಸ್.ಆರ್.ಬಿರಾದಾರ, ವಿಜಯಪುರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>