ಕೊರೊನಾ ಸೋಂಕಿನ ಈ ಗಂಭೀರ ಪರಿಸ್ಥಿತಿಯಲ್ಲಿ ಜನರು ಜೀವವನ್ನು ಕೈಯಲ್ಲಿ ಹಿಡಿದು ಜೀವಿಸುತ್ತಿರುವಾಗ, ಕೋವಿಡ್ ರೋಗದ ತೀವ್ರತೆಗೆ ಕಾರಣವಾಗುವ ಪಟಾಕಿ ಸಿಡಿಸುವುದನ್ನು ನಿಷೇಧಿಸಬೇಕಾದುದು ಸರ್ಕಾರದ ಆದ್ಯತೆಯಾಗಬೇಕು. ಅನೇಕ ರಾಜ್ಯಗಳು ಈಗಾಗಲೇ ನಿಷೇಧ ಹೇರಿವೆ. ಆದರೆ ನಿಷೇಧಿಸುತ್ತೇನೆಂದು ಹೊರಟ ನಮ್ಮ ರಾಜ್ಯ ಸರ್ಕಾರ ಕೂಡಲೇ ತನ್ನ ನಿರ್ಧಾರ ಬದಲಿಸಿ ಹಸಿರು ಪಟಾಕಿಗೆ ನಿಶಾನೆ ತೋರಿದ್ದು ಯಾವ ಕಾರಣಕ್ಕಾಗಿ?